ರೈಲ್ವೆಯ ‘ಹಲಾಲ್ ಮಾತ್ರ’ ನೀತಿಗೆ ವಿಎಚ್‌ಪಿ ಆಕ್ಷೇಪ
ನವದೆಹಲಿ, 27 ನವೆಂಬರ್ (ಹಿ.ಸ.) : ಆ್ಯಂಕರ್ : ಸರ್ಕಾರಿ ಹಾಗೂ ಅರೆ ಸರ್ಕಾರಿ ಸಂಸ್ಥೆಗಳಲ್ಲಿ, ವಿಶೇಷವಾಗಿ ರೈಲ್ವೆಯಲ್ಲಿ ‘ಹಲಾಲ್ ಮಾತ್ರ’ ನೀತಿ ಜಾರಿಗೆ ಬರುತ್ತಿದೆ ಎಂಬುದಕ್ಕೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತೀವ್ರ ವಿರೋಧ ವ್ಯಕ್ತಪಡಿಸಿದೆ. ಒಂದು ಧರ್ಮದ ಆಹಾರ ಸಂಪ್ರದಾಯಗಳಿಗೆ ಆದ್ಯತೆ ನೀಡುವು
Vhp


ನವದೆಹಲಿ, 27 ನವೆಂಬರ್ (ಹಿ.ಸ.) :

ಆ್ಯಂಕರ್ : ಸರ್ಕಾರಿ ಹಾಗೂ ಅರೆ ಸರ್ಕಾರಿ ಸಂಸ್ಥೆಗಳಲ್ಲಿ, ವಿಶೇಷವಾಗಿ ರೈಲ್ವೆಯಲ್ಲಿ ‘ಹಲಾಲ್ ಮಾತ್ರ’ ನೀತಿ ಜಾರಿಗೆ ಬರುತ್ತಿದೆ ಎಂಬುದಕ್ಕೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ತೀವ್ರ ವಿರೋಧ ವ್ಯಕ್ತಪಡಿಸಿದೆ. ಒಂದು ಧರ್ಮದ ಆಹಾರ ಸಂಪ್ರದಾಯಗಳಿಗೆ ಆದ್ಯತೆ ನೀಡುವುದು ಸಂವಿಧಾನದ ಜಾತ್ಯತೀತ ತತ್ತ್ವಕ್ಕೆ ವಿರುದ್ಧವೆಂದು ಸಂಘಟನೆ ಹೇಳಿದೆ.

ವಿಎಚ್‌ಪಿ ವಕ್ತಾರ ವಿನೋದ್ ಬನ್ಸಾಲ್ ಅವರು, ಹಲಾಲ್-ಮಾತ್ರ ನೀತಿ ಮುಸ್ಲಿಮೇತರ ಮಾಂಸ ವ್ಯಾಪಾರಿ ಸಮುದಾಯಗಳ ಜೀವನೋಪಾಯಕ್ಕೆ ಹಾನಿ ಮಾಡುವ ಸಾಧ್ಯತೆ ಇದ್ದು . ಹಲಾಲ್ ಪ್ರಮಾಣೀಕರಣದಲ್ಲಿರುವ ಧಾರ್ಮಿಕ ನಿಯಮಗಳು ಸಾರ್ವಜನಿಕ ಸಂಸ್ಥೆಗಳಿಗೆ ಸೂಕ್ತವಲ್ಲವೆಂದೂ ಅವರು ಅಭಿಪ್ರಾಯಪಟ್ಟಿದ್ದಾರೆ

ಈ ವಿಚಾರದಲ್ಲಿ ಬಂದ ದೂರುಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರೈಲ್ವೆ ಮಂಡಳಿಗೆ ನೋಟಿಸ್ ನೀಡಿರುವುದು ಗಮನಾರ್ಹ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande