ದೆಹಲಿ ಸ್ಫೋಟ ಪ್ರಕರಣ : ಬಂಗಾಳದ ಶಂಕಿತ ಭಯೋತ್ಪಾದಕನ ಸಂಪರ್ಕ ಬಹಿರಂಗ
ಕೋಲ್ಕತ್ತಾ, 17 ನವೆಂಬರ್ (ಹಿ.ಸ.) : ಆ್ಯಂಕರ್ : ದೆಹಲಿ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ನಡೆದ ಸ್ಫೋಟ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಮತ್ತೊಬ್ಬ ಶಂಕಿತ ಭಯೋತ್ಪಾದಕನ ಹೆಸರು ಹೊರಬಂದಿದೆ. ನಾಡಿಯಾ ಜಿಲ್ಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಬೀರ್ ಅಹ್ಮದ್, ಜೈಲಿನಲ್ಲಿದ್ದು ಭಯೋತ್ಪಾದಕ ಚಟುವ
Terror


ಕೋಲ್ಕತ್ತಾ, 17 ನವೆಂಬರ್ (ಹಿ.ಸ.) :

ಆ್ಯಂಕರ್ : ದೆಹಲಿ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ನಡೆದ ಸ್ಫೋಟ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಮತ್ತೊಬ್ಬ ಶಂಕಿತ ಭಯೋತ್ಪಾದಕನ ಹೆಸರು ಹೊರಬಂದಿದೆ. ನಾಡಿಯಾ ಜಿಲ್ಲಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಬೀರ್ ಅಹ್ಮದ್, ಜೈಲಿನಲ್ಲಿದ್ದು ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾನೆ ಎಂಬ ಮಾಹಿತಿ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಲಭಿಸಿದೆ.

ನವೆಂಬರ್ 12ರಂದು ನಡೆದ ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿದ್ದರು. ಶಾಹಿನ್ ಶಾಹಿದ್ ನೇತೃತ್ವದ ಉಗ್ರ ಮಾಡ್ಯೂಲ್ ಈ ಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದುದಾಗಿ ಅನುಮಾನ ವ್ಯಕ್ತವಾಗಿದೆ. ಶಾಹಿನ್ ವಿಚಾರಣೆಯಲ್ಲಿ, ಜೈಲಿನಲ್ಲಿರುವ ಸಬೀರ್ ಟೆಲಿಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳ ಮೂಲಕ ಗುಂಪಿನ ಕಾರ್ಯಚಟುವಟಿಕೆಗೆ ನಿರ್ದೇಶನ ನೀಡುತ್ತಿದ್ದನು ಎಂಬುದು ಬಹಿರಂಗಗೊಂಡಿದೆ. ಸಬೀರ್, ಭಾರತದ ವಿರುದ್ಧದ ಪ್ರಚಾರ ಮತ್ತು ಹೋರಾಟಕ್ಕೆ ಇತರರನ್ನು ಪ್ರೇರೇಪಿಸಿದ್ದಾನೆ ಎನ್ನಲಾಗಿದೆ.

ಈ ನಡುವೆ, ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ ನವೆಂಬರ್ 12ರ ರಾತ್ರಿ ಸಬೀರ್‌ನ ಸಹೋದರ ಫೈಜಲ್ ಅಹ್ಮದ್ ಅವರನ್ನು ನಾಡಿಯಾ ಜಿಲ್ಲೆಯ ಬಡೆ ನಲ್ದಾ ಪ್ರದೇಶದಿಂದ ತನಿಖೆಗೆ ಒಳಪಡಿಸಿದೆ. ಅಧಿಕೃತವಾಗಿ ಆತನ ಬಂಧನವನ್ನು ಪೊಲೀಸರು ದೃಢಪಡಿಸಿಲ್ಲ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande