ವಿಜಯಪುರ, 09 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘವು ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶೇಷವಾದ ಪ್ರಗತಿಯನ್ನು ಸಾಧಿಸಿ, ಕೇಂದ್ರ ಸರ್ಕಾರದಿಂದ ಅನುಮತಿ ಪಡೆದು ಸಿದ್ಧಸಿರಿ ಮಲ್ಟಿಸ್ಟೇಟ್ ಮಲ್ಟಿ ಪರ್ಪೋಸ್ ಕೋ.ಆಪರೇಟಿವ್ ಸೊಸೈಟಿ ಲಿಮಿಟೆಡ್ ಆಗಿ ಪರಿವರ್ತನೆಯಾಗಿದೆ ಎಂದು ಸೊಸೈಟಿ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, 2006ರ ಮೇ 29 ರಂದು ಶುಭ ಗಳಿಗೆಯಲ್ಲಿ ಪ್ರಾರಂಭವಾಗಿ ಕರ್ನಾಟಕ ರಾಜ್ಯದಾದ್ಯಂತ ಕಾರ್ಯಕ್ಷೇತ್ರ ಹೊಂದಿ, ಸದಸ್ಯರ ವಿಶ್ವಾಸ, ಸಹಕಾರಿ ಬೆಳವಣಿಗೆಗೆ ಪರೋಕ್ಷವಾಗಿ ಅಪರೋಕ್ಷವಾಗಿ ಸಹಾಯ ಸಹಕಾರ ನೀಡಿದ್ದರಿಂದ ಕರ್ನಾಟಕ ರಾಜ್ಯದಾದ್ಯಂತ ಶಾಖೆಗಳನ್ನು ಹೊಂದಿದೆ.
ಕೇವಲ ಹಣಕಾಸಿನ ವ್ಯವಹಾರವಲ್ಲದೆ, ಸಾರ್ವಜನಿಕರಿಗೆ, ರೈತ ಬಾಂಧವರಿಗೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲತೆಯನ್ನು ಹೊಂದಲು ಸೇವೆ ಒದಗಿಸುತ್ತಿದೆ. ಇನ್ನೂ ಹಚ್ಚಿನ ಸಮಾಜ ಸೇವೆ, ದೇಶದ ಅಭಿವೃದ್ದಿಗಾಗಿ, ಯುವಕ ಯುವತಿಯರಿಗೆ ಉದ್ಯೋಗ, ಉದ್ಯಮಿಗಳಿಗೆ ಸಾಲ ನೀಡಿ ಅವುಗಳ ಪ್ರಗತಿಗೆ ಪೂರಕವಾದ ಸೇವೆ ಕಲ್ಪಿಸುವುದು ನಮ್ಮ ಸಂಸ್ಥೆಯ ಧ್ಯೇಯ ಉದ್ದೇಶವಾಗಿದೆ.
ಆಡಳಿತ ಮಂಡಳಿಯು ಇನ್ನೂ ಹೆಚ್ಚಿನ ಪ್ರಗತಿಗಾಗಿ ದಿಟ್ಟ ನಿರ್ಧಾರವನ್ನು ತಗೆದಕೊಂಡು ನೆರೆಯ ರಾಜ್ಯಗಳಿಗೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಕೇಂದ್ರ ಸರ್ಕಾರದ ಬಹು ರಾಜ್ಯ ಸಹಕಾರ ಸಂಘಗಳ ಅಡಿಯಲ್ಲಿ ನೋಂದೆಣಿ (ಎಂ.ಎಸ್.ಸಿ.ಎಸ್/ಸಿ.ಆರ್/1644/2025)ಯಾಗಿ ಮೊದಲ ಬಾರಿಗೆ ಮಹಾರಾಷ್ಟ್ರ ರಾಜ್ಯದಲ್ಲಿ ಕಾರ್ಯಾರಂಭಿಸಲು ಸನ್ನದ್ದವಾಗಿದೆ.
ನೋಂದಣಿಯಾದ ಕಾಯ್ದೆ ಅಡಿಯಲ್ಲಿ ಕಲಂ 25 ಮಲ್ಟಿಸ್ಟೇಟ್ ಕೋ ಆಪ್ ಕಾಯಿದೆ-2002ರ ಪ್ರಕಾರ ಸೌಹಾರ್ದ ಸಹಕಾರಿ ಸಂಘಗಳು, ಪತ್ತಿನ ಸಹಕಾರಿ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಇತರೆ ಸಂಘ-ಸಂಸ್ಥೆಗಳು ನಮ್ಮ ಸೊಸಾಯಿಟಿಯಲ್ಲಿ ಠೇವಣಿ ಮಾಡಲು ಅವಕಾಶವಿರುತ್ತದೆ. ಎಲ್ಲರೂ ಇದರ ಸದುಪಯೋಗ ಮಾಡಿಕೊಳ್ಳಬೇಕು. ಸದಸ್ಯರ ವಿಶ್ವಾಸ ನಂಬಿಕೆಯೇ ಪ್ರಗತಿಗೆ ಕಾರಣಿಭೂತರು ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande