ರಾಯಚೂರು, 19 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಸಾರ್ವಜನಿಕರು ಮುಂಜಾಗ್ರತೆಯನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳಾದ ಡಾ.ಸುರೇಂದ್ರಬಾಬು ಅವರು ತಿಳಿಸಿದ್ದಾರೆ.
ಪಟಾಕಿಗಳಿಗೆ ಬೆಂಕಿ ಹಚ್ಚುವಾಗ ಅವುಗಳ ಕಡೆ ಮುಖ ಮಾಡಿ ಅದರಿಂದ ದೂರ ಸೆರೆದು ಬೆಂಕಿ ಹಚ್ಚಬೇಕು., ಪಟಾಕಿಗೆ ಬೆಂಕಿ ಹಚ್ಚಿದ ಬಳಕೆ ಅದನ್ನು ಕೈಯಲ್ಲಿ ಮುಟ್ಟಬೇಡಿ ಅಥವಾ ಕೈಯಲ್ಲಿ ಹಿಡಿದು ಬೇರೆ ಕಡೆ ಕೊಂಡೋಯ್ಯಬೇಡಿ, ಸಡಿಲವಾದ ಅಥವಾ ನೈಲಾನ್ ಬಟ್ಟೆಗಳನ್ನು ಧರಿಸಬೇಡಿ, ಮೇಣದಬತ್ತಿ ಅಥವಾ ಲೈಟರಗಳನ್ನು ಬಳಸಿ ಪಟಾಕಿ ಸುಡಬೇಡಿ ಉದ್ದನೇ ಸುರು ಸುರು ಬತ್ತಿಯಿಂದ ಪಟಾಕಿಗೆ ಬೆಂಕಿ ಹಚ್ಚಿ ತಕ್ಷಣವೇ ದೂರ ಸರಿಯಿರಿ, ನಿಮ್ಮ ಕಣ್ಣುಗಳನ್ನು ಹೊಗೆ ಮತ್ತು ಬೆಂಕಿಯಿ0ದ ರಕ್ಷಿಸಲು ಪಟಾಕಿ ಸಿಡಿಸುವಾಗ ಕನ್ನಡಕವನ್ನು ಧರಿಸಿರಿ, ನೀರಿನ ಬಕೆಟ್ ಮತ್ತು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಪಕ್ಕದಲ್ಲಿ ಇಟ್ಟುಕೊಳ್ಳಿ, ತೆರೆದ ಜಾಗದಲ್ಲಿ ಮಾತ್ರ ಪಟಾಕಿ ತಿಳಿಸಿ ಮನೆ ಅಂಗಳ ಉತ್ತಮ ಮನೆಯ ಒಳಗೆ ಪಟಾಕಿಗೆ ಬೆಂಕಿ ಹಚ್ಚಬೇಡಿ ಮತ್ತು ಪಟಾಕಿ ಸಿಡಿಸುವಾಗ ಪಾದರಕ್ಷಗಳನ್ನು ಕಡ್ಡಾಯವಾಗಿ ಧರಿಸಲು ಮರೆಯದಿರಿ ಎಂದು ಅವರು ಸಲಹೆ ಮಾಡಿದ್ದಾರೆ.
ತುರ್ತು ಸಂಪರ್ಕಕ್ಕೆ ವ್ಯವಸ್ಥೆ : ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಪಟಾಕಿಗಳು ಹೊಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಸರ್ಕಾರದ ಸೂಚನೆಯಂತೆ ಹಸಿರು ಪಟಾಕಿಗಳನ್ನು ಸಿಡಿಸುವದರಿಂದ ಪರಿಸರ ಮಾಲಿನ್ಯ ಮತ್ತು ಆರೋಗ್ಯಕರವಾಗಿರುತ್ತದೆ. ಬೇರೆ ಪಟಾಕಿ ಹೆಚ್ಚಿನ ಮದ್ದು ಉಳ್ಳ ಪಟಾಕಿಗಳನ್ನು ಸಿಡಿಸುವಾಗ ಕಣ್ಣಿಗೆ ತೊಂದರೆ ಮತ್ತು ಏನಾದರು ಅವಗಡಗಳು ಸಂಭವಿಸಿದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ತಾಲೂಕಿನ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಹೋಗಬೇಕು ಮತ್ತು ಅಲ್ಲಿ ಎಲ್ಲಾ ತಜ್ಞರು ಲಭ್ಯವಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಆಯಾ ಕಡೆಗಿನ ವೈದ್ಯರು ಮತ್ತು ವೈದ್ಯಾಧಿಕಾರಿಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಡಿಎಚ್ಓ ಅವರು ಸಲಹೆ ಮಾಡಿದ್ದಾರೆ.
ಅಧಿಕಾರಿಗಳ ವಿವರ : ರಾಯಚೂರು ತಾಲೂಕಿಗೆ ರಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಸೂರ್ಯಕಾಂತ ಮಂಡೋಲಕರ್ ಮೊ.9448179303 ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಫರಾನಾ ಮೊ.9686590067 ಅವರಿಗೆ ಸಂಪರ್ಕಿಸಬಹುದಾಗಿದೆ.
ಮಾನವಿ ತಾಲೂಕಿಗೆ ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಶರಣಬಸವರಾಜ್ ಮೊ.7019496475 ಮತ್ತು ತಾಲೂಕ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅರವಿಂದ ಮೊ.9591155480 ಸಂಪರ್ಕಿಸಬಹುದಾಗಿದೆ.
ಸಿಂಧನೂರ ತಾಲೂಕಿಗೆ ತಾಲೂಕ ಆರೋಗ್ಯ ಅಧಿಕಾರಿ ಡಾ.ಅಯ್ಯನಗೌಡ ಮೊ.7259403400 ಅಥವಾ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸುರೇಶಗೌಡ ಮೊ.9448034170 ಅವರಿಗೆ ಸಂಪರ್ಕಿಸಬಹುದಾಗಿದೆ.
ಲಿಂಗಸ್ಗೂರು ತಾಲೂಕಿಗೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಅಮರೇಶ ಪಾಟೀಲ್ ಮೊ.9902848859 ಹಾಗೂ ತಾಲೂಕ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ರುದ್ರಗೌಡ ಮೊ.9986515047 ಅವರಿಗೆ ಸಂಪರ್ಕಿಸಬಹುದಾಗಿದೆ.
ದೇವದುರ್ಗ ತಾಲೂಕಿಗೆ ತಾಲೂಕು ಆರೋಗ್ಯ ಅಧಿಕಾರಿ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಬಂದೇಶ್ವರ ಮೊ.9343690209ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್