ಎರಡು ಜಿಲ್ಲೆಯ ಸಾರ್ವಜನಿಕರ ಗಮನಕ್ಕೆ
ಗದಗ, 16 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆ ಮುಂಡರಗಿ ತಾಲೂಕಿನ 110 ಕೆ.ವ್ಹಿ. ಸಿಂಗಟಾಲುರು ವಿದ್ಯುತ್ ವಿತರಣಾ ಕೇಂದ್ರದಿಂದ ಕೂಡ್ಲಿಗಿ ತಾಲೂಕಿನ 74 ಕೆರೆಗೆಳಿಗೆ ನೀರುತುಂಬಿಸುವ ಯೋಜನೆಯ 18000 ಕೆವಿಎ ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಮಾರ್ಗವನ್ನು 5.6 ಕಿ.ಮೀ ದೂ
ಪೋಟೋ


ಗದಗ, 16 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆ ಮುಂಡರಗಿ ತಾಲೂಕಿನ 110 ಕೆ.ವ್ಹಿ. ಸಿಂಗಟಾಲುರು ವಿದ್ಯುತ್ ವಿತರಣಾ ಕೇಂದ್ರದಿಂದ ಕೂಡ್ಲಿಗಿ ತಾಲೂಕಿನ 74 ಕೆರೆಗೆಳಿಗೆ ನೀರುತುಂಬಿಸುವ ಯೋಜನೆಯ 18000 ಕೆವಿಎ ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿದ್ಯುತ್ ಮಾರ್ಗವನ್ನು 5.6 ಕಿ.ಮೀ ದೂರದವರೆಗೆ ನಿರ್ಮಿಸುವ ಕಾಮಗಾರಿ ಪೂರ್ಣಗೊಂಡಿದ್ದು ಈ ವಿದ್ಯುತ್ ಮಾರ್ಗವು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಸಿಂಗಟಾಲುರು, ಹಮ್ಮಿಗಿ ಮತ್ತು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ರಾಜವಾಳ ಗ್ರಾಮಗಳ ಮುಖಾಂತರ ಸರಹದ್ದಿನಲ್ಲಿ ಹಾದುಹೋಗುತ್ತದೆ. ಇದನ್ನು ದಿನಾಂಕ 17-10-2025 ರಂದು ಅಥವಾ ತದನಂತರ ಕಾರ್ಯಗತಗೊಳಿಸಲಾಗುವುದು.

ಸಾರ್ವಜನಿಕರು ಈ ವಿದ್ಯುತ್ ಮಾರ್ಗದಿಂತ ದೂರವಿರಬೇಕಾಗಿ ಕೋರಲಾಗಿದೆ, ದನ-ಕರುಗಳನ್ನು ವಿದ್ಯುತ್ ಗೋಪುರಗಳಿಗೆ ಕಟ್ಟುವುದಾಗಲಿ, ಮಾರ್ಗದ ಮೇಲೆ ಹಸಿ ದಂಟು-ತಂತಿಯನ್ನು ಎಸೆಯುವುದಾಗಲಿ ಗೋಪುರಗಳ ಮೇಲೆ ಹತ್ತುವುದಾಗಲಿ ಮಾಡಬಾರದು. ಒಂದು ವೇಳೆ ಮೇಲಿನ ಕಾರಣಗಳಿಂದ ವಿದ್ಯುತ್ ಅಪಘಾತಕ್ಕೆ ಒಳಪಟ್ಟರೆ ಕ.ನೀ.ನಿ.ನಿಯಮಿತವು/ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಜವಾಬ್ದಾರಿಯಲ್ಲ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande