ಉನ್ನತ ಮಾವೋವಾದಿ ಮಲ್ಲೋಜಿ ವೇಣುಗೋಪಾಲ್ ರಾವ್ ತಂಡ ಪೋಲಿಸರಿಗೆ ಶರಣು
ಗಡ್ಚಿರೋಲಿ, 14 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ತೆಲಂಗಾಣದ ಉನ್ನತ ಮಾವೋವಾದಿ ನಾಯಕ ಮಲ್ಲೋಜಿ ವೇಣುಗೋಪಾಲ್ ರಾವ್ ಮತ್ತು ಅವರ 60 ಸದಸ್ಯರ ತಂಡ ಇಂದು ಗಡ್ಚಿರೋಲಿ ಪೊಲೀಸ್ ಠಾಣೆ ಎದುರು ಶರಣಾಗಿದ್ದಾರೆ. ವೇಣುಗೋಪಾಲ್ ರಾವ್ ಪೋಲಿಸರಿಗೆ ಅತ್ಯಂತ ಬೇಕಾದ ಮಾವೋವಾದಿಗಳಲ್ಲಿ ಒರ್ವನಾಗಿದ್ದು, ಆತನ ಮೇಲೆ ಸರ
Surrender


ಗಡ್ಚಿರೋಲಿ, 14 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ತೆಲಂಗಾಣದ ಉನ್ನತ ಮಾವೋವಾದಿ ನಾಯಕ ಮಲ್ಲೋಜಿ ವೇಣುಗೋಪಾಲ್ ರಾವ್ ಮತ್ತು ಅವರ 60 ಸದಸ್ಯರ ತಂಡ ಇಂದು ಗಡ್ಚಿರೋಲಿ ಪೊಲೀಸ್ ಠಾಣೆ ಎದುರು ಶರಣಾಗಿದ್ದಾರೆ. ವೇಣುಗೋಪಾಲ್ ರಾವ್ ಪೋಲಿಸರಿಗೆ ಅತ್ಯಂತ ಬೇಕಾದ ಮಾವೋವಾದಿಗಳಲ್ಲಿ ಒರ್ವನಾಗಿದ್ದು, ಆತನ ಮೇಲೆ ಸರ್ಕಾರ ₹1 ಕೋಟಿ ಬಹುಮಾನ ಘೋಷಿಸಿತ್ತು.

ಪೊಲೀಸರು ನಡೆಸಿದ ನಿರಂತರ ತಪಾಸಣೆ ಮತ್ತು ಭದ್ರತಾ ಕಾರ್ಯಗಳ ಫಲವಾಗಿ ಈ ಶರಣಾಗುವಿಕೆ ನಡೆದಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಘಟನೆಗೆ ಸಂಬಂಧಿಸಿ, ಪ್ರದೇಶದ ಶಾಂತಿ ಮತ್ತು ಭದ್ರತೆ ಸ್ಥಾಪನೆಗೆ ಇದು ಮಹತ್ವಪೂರ್ಣ ಸಾಧನೆ ಎಂದು ಹೇಳಿದ್ದಾರೆ.

ಶರಣಾದ ತಂಡವು ಮಾವೋ ಚಟುವಟಿಕೆಗಳಿಂದ ಉಂಟಾಗುತ್ತಿದ್ದ ದಾಳಿಗಳು, ಭಯೋತ್ಪಾದನೆ ಮತ್ತು ಕೊಲೆಗಳಲ್ಲಿ ಭಾಗವಹಿಸುತ್ತಿತ್ತು

ಈ ತಂಡದ ಶರಣಾಗುವಿಕೆಯಿಂದ ಗಡ್ಚಿರೋಲಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಮಾವೋವಾದಿ ಚಟುವಟಿಕೆಗಳ ಮೇಲೆ ಭಾರಿ ಪೆಟ್ಟು ಬಿದ್ದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande