
ಜಮ್ಮು, ಜುಲೈ 26(ಹಿ.ಸ.):
ಆ್ಯಂಕರ್: ಅಮರನಾಥ ಯಾತ್ರೆಯ 19ನೇ ತಂಡದಲ್ಲಿ 4,474 ಯಾತ್ರಿಕರು ಶನಿವಾರ ಜಮ್ಮುವಿನ ಭಗವತಿ ನಗರ ಯಾತ್ರಿನಿಲಯದಿಂದ ಕಠಿಣ ಭದ್ರತೆಯ ನಡುವೆ ಬಾಲ್ಟಾಲ್ ಮೂಲ ಶಿಬಿರದತ್ತ ಪ್ರಯಾಣ ಬೆಳೆಸಿದರು.
166 ವಾಹನಗಳ ಮೂಲಕ ಬೆಳಗಿನ ಜಾವ 2.42ಕ್ಕೆ ಹೊರಟ ಈ ತಂಡದಲ್ಲಿ 3,531 ಪುರುಷರು, 785 ಮಹಿಳೆಯರು, 96 ಸಾಧುಗಳು, 51 ಸಾಧ್ವಿಯರು, 10 ಮಕ್ಕಳು ಹಾಗೂ ಒಬ್ಬ ತೃತೀಯಲಿಂಗಿ ಯಾತ್ರಿಕರು ಇದ್ದರು. ಈ ಬಾರಿ ಪಹಲ್ಗಾಮ್ ಮಾರ್ಗಕ್ಕೆ ಯಾವುದೇ ತಂಡವನ್ನು ಕಳುಹಿಸಲಾಗಿಲ್ಲ.
ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ–44ರಲ್ಲಿ ಭೂಕುಸಿತ, ಕೆಸರು ಕುಸಿತ ಮತ್ತು ಕಲ್ಲು ಬೀಳುವ ಘಟನೆಗಳ ಹಿನ್ನೆಲೆಯಲ್ಲಿ ಯಾತ್ರೆ ಆರು ದಿನಗಳ ಕಾಲ ಸ್ಥಗಿತಗೊಂಡಿತ್ತು. ಹೆದ್ದಾರಿಯನ್ನು ಸಂಚಾರಕ್ಕೆ ಪುನಃ ತೆರೆಯಲಾಗಿರುವ ಹಿನ್ನೆಲೆಯಲ್ಲಿ ಯಾತ್ರೆ ಮತ್ತೆ ಆರಂಭವಾಗಿದೆ.
ಯಾತ್ರಿಕರ ಸುರಕ್ಷಿತ ಸಂಚಾರಕ್ಕಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಹಾಗೂ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಒದಗಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.