ದೆಹಲಿ ವಿಮಾನ ನಿಲ್ದಾಣದಲ್ಲಿ ಅಪಹರಣ ವಿರೋಧಿ ಸಿಐಎಸ್ಎಫ್ ಅಣಕು ಕಾರ್ಯಾಚರಣೆ
ನವದೆಹಲಿ, 09 ಏಪ್ರಿಲ್ (ಹಿ.ಸ.) : ಆ್ಯಂಕರ್ : ದೇಶದಲ್ಲಿ ಯಾವುದೇ ಭಯೋತ್ಪಾದಕ ದಾಳಿ ನಡೆಯದಂತೆ ಸನ್ನದ್ಧವಾಗಿರಲು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ವಾರ್ಷಿಕ ಅಪಹರಣ ವಿರೋಧಿ ಸಮರಾಭ್ಯಾಸವನ್ನು ನಡೆಸಿತು.
CISF-ANTI-HIJACKING-EXERCISE


ನವದೆಹಲಿ, 09 ಏಪ್ರಿಲ್ (ಹಿ.ಸ.) :

ಆ್ಯಂಕರ್ : ದೇಶದಲ್ಲಿ ಯಾವುದೇ ಭಯೋತ್ಪಾದಕ ದಾಳಿ ನಡೆಯದಂತೆ ಸನ್ನದ್ಧವಾಗಿರಲು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ವಾರ್ಷಿಕ ಅಪಹರಣ ವಿರೋಧಿ ಸಮರಾಭ್ಯಾಸವನ್ನು ನಡೆಸಿತು. ಡಿಐಜಿ ಬಾಬು ರಾಮ್ ನೇತೃತ್ವದಲ್ಲಿ ನಡೆದ ಈ ಸಮರಾಭ್ಯಾಸದಲ್ಲಿ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ಕಾರ್ಯಾಚರಣೆಯಲ್ಲಿ ಎನ್ಎಸ್ಜಿ, ದೆಹಲಿ ಪೊಲೀಸ್, ಐಬಿ, ಬಿಸಿಎಎಸ್, ಡಿಜಿಸಿಎ, ಡಿಐಎಎಲ್, ಏರ್ಪೋರ್ಟ್ ಅಗ್ನಿಶಾಮಕ ತಂಡಗಳು, ವೈದ್ಯಕೀಯ ತಂಡಗಳು ಮತ್ತು ವಿಮಾನಯಾನ ಸಂಸ್ಥೆಗಳು ಭಾಗವಹಿಸಿದ್ದವು ಎಂದು ಸಿಐಎಸ್ಎಫ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.

ಸಿ. ಐ. ಎಸ್. ಎಫ್. ನ ತ್ವರಿತ ಪ್ರತಿಕ್ರಿಯೆ ತಂಡ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ಒಟ್ಟಾಗಿ ತ್ವರಿತ ಕ್ರಮವನ್ನು ಪ್ರದರ್ಶಿಸಿದವು. ಅಂತಹ ಅಭ್ಯಾಸವು ಎಲ್ಲಾ ಏಜೆನ್ಸಿಗಳ ನಡುವಿನ ಸಮನ್ವಯ ಮತ್ತು ಸನ್ನದ್ಧತೆಯನ್ನು ಪರಿಶೀಲಿಸುತ್ತದೆ. ಯಾವುದೇ ತುರ್ತು ಪರಿಸ್ಥಿತಿಗೆ ಭದ್ರತಾ ಪಡೆಗಳು ಎಷ್ಟು ಬೇಗನೆ ಪ್ರತಿಕ್ರಿಯಿಸುತ್ತವೆ, ವೈದ್ಯಕೀಯ ತಂಡಗಳು ಎಷ್ಟು ಬೇಗನೆ ಸ್ಥಳಕ್ಕೆ ತಲುಪುತ್ತವೆ ಮತ್ತು ವಿಮಾನ ನಿಲ್ದಾಣ ಕಾರ್ಯಾಚರಣೆಯಲ್ಲಿ ತೊಡಗಿರುವ ಇತರ ಏಜೆನ್ಸಿಗಳು ಹೇಗೆ ಸಹಕರಿಸುತ್ತವೆ ಎಂಬುದನ್ನು ಇದು ತೋರಿಸುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande