
ವಿಜಯಪುರ, 04 ಮಾರ್ಚ್ (ಹಿ.ಸ.)
ಆ್ಯಂಕರ್ : ನಾಡಿನೆಲ್ಲಡೆ ಬಣ್ಣದ ಹಬ್ಬ ಓಕುಳಿಯಲ್ಲಿ ಜನ ಸಂಭ್ರಮಿಸುತ್ತಿದ್ದರೆ. ಆದರೆ ಈ ಸಾಂಪ್ರದಾಯಿಕ ಹೋಳಿ ಹಬ್ಬಕ್ಕೆ ರಾಜ್ಯದ ಮುಖ್ಯಮಂತ್ರಿ ಕುರ್ಚಿ ಕಾದಾಟದ ಪ್ರಹಸನದ ಬಗ್ಗೆ ಅಣುಕು ಪ್ರದರ್ಶನ ನಡೆದ ಹಾಸ್ಯಮಯ ಪ್ರಸಂಗ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಹೌದು ಹೋಳಿ ಹಬ್ಬಕ್ಕೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದ ಮಂಗಳವಾರ ಪೇಟೆಯಲ್ಲಿ ಈ ಹಾಸ್ಯಮಯ ಹಾಗೂ ಅಣುಕು ಪ್ರದರ್ಶನ ನಡೆದದೆ.
ನಗರದಲ್ಲಿ ಹೋಳಿ ಹಬ್ಬದಲ್ಲೂ ಮುಖ್ಯಮಂತ್ರಿ ಯಾರು? ಸಿಎಮ್ ನಾನಾ ನೀನಾ ಎಂಬ ಚರ್ಚೆ ಕುರ್ಚಿ ಇಟ್ಟ ಘಟನೆ ನಡೆದಿದೆ.
ಕಾಮನ ಮೂರ್ತಿ ಅಕ್ಕಪಕ್ಕ ಸಿಎಮ್ ಸಿದ್ದರಾಮಯ್ಯ ಹಾಗೂ ಡಿಕೆಶಿ ಭಾವಚಿತ್ರ.
ಮೇಲೆ ದಿಲ್ಲಿ ಚಲೊ ಹೈಕಮಾಂಡ್ ಭೇಟಿ.
ಮುಖ್ಯಮಂತ್ರಿ ಯಾರು? ನಾನಾ ನೀನಾ ಎಂಬ ಬರಹ. ಗಮನ ಸೆಳೆದಿದೆ.
ಎಲ್ಲರ ಗಮನ ಸೆಳೆದ ಕಾಮದೇವನ ಮೂರ್ತಿ ಬಳಿ ಹಾಕಿದ ಸ್ಲೋಗನ್ ಗಳು.
ಕಾಂಗ್ರೆಸ್ ಕಾರ್ಯಕರ್ತರಿಂದೇಲೇ ವಿಶೇಷ ಬರಹ ಬ್ಯಾನರ್ ಹಾಕುವ ಮೂಲಕ ಸ್ವಪಕ್ಷದ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ನಡುವಿನ ಕುರ್ಚ
ಕಾದಾಟದ ಬಗ್ಗೆ ವಿಡಂಬನಾತ್ಮಕವಾಗಿ ಪಸ್ತುತ ಪಡೆಸಿದ್ದು ವಿಶೆಷವಾಗಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande