


ಬಳ್ಳಾರಿ, 30 ಮಾರ್ಚ್ (ಹಿ.ಸ.)
ಆ್ಯಂಕರ್ : ಬಳ್ಳಾರಿಯ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ಮಟಕಾ ಜೂಜಾಟವಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿ, 19 ಲಕ್ಷ ರೂಪಾಯಿ 44 ಸಾವಿರ ರೂಪಾಯಿ ನಗದು, ಮೊಬೈಲ್, ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರು ರೂಪನಗುಡಿ ನಿವಾಸಿ ಜಿ.ವಿ. ರಾಮಾಂಜಿನೇಯಲು, ಬಳ್ಳಾರಿಯ ಮಿಲ್ಲರ್ಪೇಟೆಯ ನೂರ್ ಅಲಿಯಾಸ್ ನೂರ್ ಮಹ್ಮದ್ ಮತ್ತು ಆಂಧ್ರಪ್ರದೇಶದ ಉರವಕೊಂಡ ತಾಲೂಕಿನ ಕುಡೇರ ಮಂಡಲಂನ ಚೋಳ ಸಮುದ್ರಂ ಗ್ರಾಮ ನಿವಾಸಿ ಜನ್ನೆ.
ಎಪಿಎಂಸಿ ಪೊಲೀಸರು ಪ್ರಕರಣ ದಾಖಲಿಸಿ. ತನಿಖೆ ನಡೆಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್