





ಕೊಪ್ಪಳ, 08 ಜನವರಿ (ಹಿ.ಸ.) :
ಆ್ಯಂಕರ್ : ನಗರದ ಶ್ರೀ ಗವಿಸಿದ್ಧೇಶ್ವರ ಮಠದಜಾತ್ರಾ ಮಹೋತ್ಸವದ ಅಂಗವಾಗಿ ಗಾಂಧಿ ಬಳಗ ಕೊಪ್ಪಳ ಅವರುಜನೆವರಿ 6,7,8-2025 ರಂದು ಮೂರು ದಿನಗಳ ಕಾಲ ಗವಿಸಿದ್ಧೇಶ್ವರ ಮಠದ ಬಲಭಾಗದ ಬೆಟ್ಟ ಹಾಗೂ ಪ್ರಸಾದಕ್ಕೆ ಹೋಗುವ ಮಾರ್ಗವನ್ನು ಸ್ವಚ್ಛ ಗೊಳಿಸುವ ಕಾರ್ಯವನ್ನು ಮೂರು ದಿನಗಳಿಂದ, ಕಳೆದ ಮೂರು ವರ್ಷಗಳಂತೆ ಈ ವರ್ಷವೂ ಮಾಡಿದ್ದಾರೆ.
ಪ್ರತಿ ನಿತ್ಯ ಶಿಸ್ತಿನಿಂದ ಐದುಗಂಟೆಗೆ ಬಂದು ಸ್ವಚ್ಛತಾಕಾರ್ಯದಲ್ಲಿ ಪಾಲ್ಗೊಂಡು, ಸ್ವಚ್ಛತಾಕಾರ್ಯ ಮುಗಿದ ಮೇಲೆ ಧ್ಯಾನ, ಭಜನ್ ಹಾಗೂ ಗಾಂಧಿಚಿಂತನ ಮಾಡಿಗಾಂಧಿ ಬಳಗ ಕೊಪ್ಪಳ ಸದಸ್ಯರು ನಿರ್ಗಮಿಸುತ್ತಿದ್ದರು.
ಮೂರು ದಿನಗಳ ಗಾಂಧಿಚಿಂತನವನ್ನುಕ್ರಮವಾಗಿ ನಾಗರಾಜನಾಯಕಡಿ.ಡೊಳ್ಳಿನ, ವಿರೇಶ ಮೇಟಿ, ಡಾ.ಪ್ರಭುರಾಜನಾಯಕ ಮಾಡಿದರೆ ನಿರೂಪಣೆಯನ್ನು ಪ್ರಕಾಶಗೌಡ, ಪ್ರಾಣೇಶ ಪೂಜಾರ, ಶಿವಪ್ಪ ಜೋಗಿ ಮಾಡಿದರು.
ಮೂರು ದಿನಗಳ ಸ್ವಚ್ಛತಾಕಾರ್ಯದಲ್ಲಿ ಶರಣಪ್ಪ ಬಾಚಲಾಪುರ,ಆನಂದತೀರ್ಥ ಪ್ಯಾಟಿ, ಬಸವರಾಜ ಸವಡಿ, ಮಲ್ಲಪ್ಪ ಹವಳೆ, ಗುರುಸ್ವಾಮಿ, ಹೊಳಿಬಸಯ್ಯ, ವಿರೇಶಕೌಂಟಿ, ಅಂದಪ್ಪ ಬೋಳರೆಡ್ಡಿ, ಸತೀಶ ದನಗಳದೊಡ್ಡಿ, ಮಂಜುನಾಥ ಕುದುರಿ, ಗುರುರಾಜ, ಶರೀಫ್, ಶ್ರೀಪತಿ ವೀರಭದ್ರಪ್ಪ, ಮತ್ತಿತ್ತರರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್