

ಕೊಪ್ಪಳ, 07 ಜನವರಿ (ಹಿ.ಸ.) :
ಆ್ಯಂಕರ್ : ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧವಾದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸುವ ಪಾದಯಾತ್ರಿಗಳಿಗೆ ಭಕ್ತಾದಿಗಳಿಗೆ ಹೊಸಪೇಟೆ ರಸ್ತೆಯಲ್ಲಿ ಇರುವ ಬಲ್ದೋಟ (ಎಂಎಸ್ ಪಿ ಎಲ್) ಗೇಟ್ ಬಳಿ ಫಲಹಾರ ಸೇವೆಯನ್ನು ಮಾಡಲಾಗಿತ್ತು.
ಪಾದಯಾತ್ರಿಗಳು ಕುಡಿಯುವ ನೀರು, ಫಲಹಾರ ಸೇವಿಸಿ ವಿಶ್ರಾಂತಿ ಪಡೆದು ಜಾತ್ರೆಗೆ ಪಾದಯಾತ್ರೆ ಮುಂದುವರಿಸಿದರು.
ಈ ಸಂದರ್ಭದಲ್ಲಿ ಬಲ್ದೋಟದ ಪ್ಲಾಂಟ್ ಮುಖ್ಯಸ್ಥರಾದ ವೀರೇಶ್ ಕೆ, ಆಡಳಿತ ವಿಭಾಗದ ಶ್ರೀನಾಥ್ ಎಚ್ಆರ್ , ಗೌತಮ್ ಎಚ್ಆರ್, ಮಂಜುನಾಥ್ ಹಾಗೂ ಎಂಎಸ್ ಪಿ ಎಲ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್