ಆಯುರ್ವೇದ ಪ್ರಚಾರ ಹೆಚ್ಚಿಸಬೇಕಿದೆ : ಪೂಜಾರ
ವಿಜಯಪುರ, 23 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಆಯುರ್ವೇದದ ಮೂಲ ಭಾರತವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಭಾರತೀಯರು ವಿದೇಶಿ ಚಿಕಿತ್ಸಾ ವಿಧಾನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬೇಗನೆ ಗುಣಮುಖರಾಗಲು ವಿದೇಶಿ ಔಷಧಿ ಸೇವನೆಗೆ ಮುಂದಾಗುತ್ತಿರುವ ಸಂದರ್ಭದಲ್ಲೂ, ಆಯುರ್ವೇದವು ಯಾವುದೇ ದುಷ್ಪರಿಣಾ
ಪೂಜಾರ


ವಿಜಯಪುರ, 23 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಆಯುರ್ವೇದದ ಮೂಲ ಭಾರತವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಭಾರತೀಯರು ವಿದೇಶಿ ಚಿಕಿತ್ಸಾ ವಿಧಾನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬೇಗನೆ ಗುಣಮುಖರಾಗಲು ವಿದೇಶಿ ಔಷಧಿ ಸೇವನೆಗೆ ಮುಂದಾಗುತ್ತಿರುವ ಸಂದರ್ಭದಲ್ಲೂ, ಆಯುರ್ವೇದವು ಯಾವುದೇ ದುಷ್ಪರಿಣಾಮಗಳಿಲ್ಲದೆ ನಿಧಾನವಾಗಿ ಜೀವನದ ತುಂಬಾ ಲಾಭ ನೀಡುವ ಚಿಕಿತ್ಸಾ ವಿಧಾನವಾಗಿದೆ. ಆದ್ದರಿಂದ ಇಂದಿನ ದಿನಮಾನಗಳಲ್ಲಿ ಆಯುರ್ವೇದದ ಪ್ರಚಾರವನ್ನು ಹೆಚ್ಚಿಸಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಪಿ.ಹೆಚ್. ಪೂಜಾರ ಹೇಳಿದರು.

ನಗರದ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆಯುಷ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಧನ್ವಂತರಿ ಜಯಂತಿ ಹಾಗೂ ೧೦ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಧನ್ವಂತರಿ ದೇವರನ್ನು ಆಯುರ್ವೇದ ಚಿಕಿತ್ಸೆಯ ಪಿತಾಮಹರಾಗಿ ಪರಿಗಣಿಸಲಾಗಿದ್ದು, ಈ ವಿಧಾನವು ಪರಂಪರೆಯಿ0ದಲೇ ಬೆಳೆದು ಬಂದಿದೆ. ಗಿಡಮೂಲಿಕೆಗಳು ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಂಡು ಸುಲಭವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಇತ್ತೀಚಿನ ಯುವಕರು ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದು, ವೈಜ್ಞಾನಿಕವಾಗಿರದ ಆಹಾರ ಪದ್ಧತಿಯನ್ನು ಅನುಸರಿಸುತ್ತಿರುವುದು ಕಳವಳಕಾರಿಯಾಗಿದೆ. ಹಣ-ಆಸ್ತಿ ಕಳೆದುಕೊಂಡರೆ ಮತ್ತೆ ಗಳಿಸಬಹುದು, ಆರೋಗ್ಯ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡ0ತೆಯೇ ಆಗುತ್ತದೆ. ಆದ್ದರಿಂದ ಯೋಗ ಹಾಗೂ ಆಯುರ್ವೇದದ ಪ್ರಚಾರ-ಪ್ರಸಾರವನ್ನು ವೈದ್ಯರು ಹಾಗೂ ಆಯುಷ ಇಲಾಖೆಯ ಸಿಬ್ಬಂದಿ ಜವಾಬ್ದಾರಿಯುತವಾಗಿ ಮಾಡಬೇಕಿದೆ. ಮೊದಲು ಅವರೇ ತಮ್ಮ ಜೀವನದಲ್ಲಿ ಆಯುರ್ವೇದವನ್ನು ಅಳವಡಿಸಿಕೊಂಡು ಗ್ರಾಮೀಣ ಮಟ್ಟದಲ್ಲಿಯೂ ಇದರ ಉಪಯೋಗ ಮನವರಿಕೆ ಮಾಡಬೇಕಿದೆ ಎಂದು ಕಿವಿಮಾತು ನೀಡಿದರು.

ಅಧ್ಯಕ್ಷತೆ ವಹಿಸಿದ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕಣ್ಣವರ ಅವರು, “ವಿದೇಶಿ ಚಿಕಿತ್ಸಾ ವಿಧಾನವು ತಾತ್ಕಾಲಿಕವಾಗಿ ಗುಣಮಾಡಿದರೂ ಆಯುರ್ವೇದವು ದೀರ್ಘಕಾಲದ ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. ಯಾವುದೇ ದುಷ್ಪರಿಣಾಮವಿಲ್ಲದೆ ಜನರನ್ನು ಗುಣಪಡಿಸುವ ಸಾಮರ್ಥ್ಯ ಆಯುರ್ವೇದಕ್ಕೆ ಇದೆ. ನಮ್ಮ ಪೂರ್ವಜರು ಅನೇಕ ಆರೋಗ್ಯ ಸಮಸ್ಯೆಗಳನ್ನು ಗಿಡಮೂಲಿಕೆಗಳಿಂದ ಪರಿಹರಿಸಿಕೊಂಡಿದ್ದಾರೆ. ಯೋಗ-ಧ್ಯಾನದ ಅಭ್ಯಾಸದಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಆದ್ದರಿಂದ ಆಯುರ್ವೇದದ ಕುರಿತು ಹೆಚ್ಚಿನ ಅರಿವು ಮೂಡಿಸಲು ಸಾಮೂಹಿಕ ಮಟ್ಟದಲ್ಲಿ ತಿಳುವಳಿಕೆ ಕಾರ್ಯಕ್ರಮಗಳು ಅಗತ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ ಅಧಿಕಾರಿ ಡಾ. ಶೇಖರಯ್ಯ ಮಠ, ನಿವೃತ್ತ ನ್ಯಾಯಾಧೀಶರು ಹಾಗೂ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಡಿ.ವೈ. ಬಸಾಪುರ, ಜಿಲ್ಲಾ ಆಸ್ಪತ್ರೆಯ ಶಸ್ತç ಚಿಕಿತ್ಸಕರು ಮಹೇಶ್ ಕೋಣೆ, ಜಿಲ್ಲಾ ಮಲೇರಿಯಾ ಅಧಿಕಾರಿ ಕುಸುಮ ಮಾಗಿ ಸೇರಿದಂತೆ ಅನೇಕರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande