ಚಡಚಣದಲ್ಲಿ ಎಸ್‌ಬಿಐ, ಪೊಲೀಸರ ನೇತೃತ್ವದಲ್ಲಿ ತುರ್ತು ಸಭೆ
ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ನೂರಕ್ಕೆ ನೂರರಷ್ಟು ನಾವು ಕಳ್ಳರನ್ನು ಹಿಡಿಯುತ್ತೇವೆ. ನಮ್ಮೇಲೆ ವಿಶ್ವಾಸ ಇರಲಿ ಎಂದು ವಿಜಯಪುರ ಹೆಚ್ಚುವರಿ ಪೊಲೀಸ ಅಧೀಕ್ಷರಾದ ರಾಮನಗೌಡ ಹಟ್ಟಿ ಹೇಳಿದರು. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಎಸ್‌ಬಿಐ ಚಡಚಣ ಶಾಖೆಯ ನೇತೃತ್ವದಲ್ಲಿ ಗ್ರಾಹಕರ ತುರ
ಸಭೆ


ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನೂರಕ್ಕೆ ನೂರರಷ್ಟು ನಾವು ಕಳ್ಳರನ್ನು ಹಿಡಿಯುತ್ತೇವೆ. ನಮ್ಮೇಲೆ ವಿಶ್ವಾಸ ಇರಲಿ ಎಂದು ವಿಜಯಪುರ ಹೆಚ್ಚುವರಿ ಪೊಲೀಸ ಅಧೀಕ್ಷರಾದ ರಾಮನಗೌಡ ಹಟ್ಟಿ ಹೇಳಿದರು.

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಎಸ್‌ಬಿಐ ಚಡಚಣ ಶಾಖೆಯ ನೇತೃತ್ವದಲ್ಲಿ ಗ್ರಾಹಕರ ತುರ್ತು ಸಭೆಯಲ್ಲಿ ಮಾತನಾಡಿದರು.

ಗ್ರಾಹಕರು ಪದೇ ಪದೇ ಎಸ್‌ಬಿಐ ಬ್ಯಾಂಕ್‌ಗೆ ಹೋಗಿ ಸಿಬ್ಬಂದಿಗಳಿಗೆ ತೊಂದರೆ ನೀಡಬೇಡಿ. ಇದೀಗ್ ನಾವು ಕಳ್ಳರನ್ನು ಹಿಡಿಯಲು ಟೀಂ ರಚನೆ ಮಾಡಿದ್ದೇವೆ. ಕಳ್ಳರನ್ನು ಹಿಡಿಯುವ ಜವಾಬ್ದಾರಿ ನಮ್ದು ಇದೆ. ಅದಕ್ಕಾಗಿ ನಿಮ್ಮ ಹಣ, ಚಿನ್ನವನ್ನು ನೂರಕ್ಕೆ ನೂರರಷ್ಟು ಮರಳಿ ತರುತ್ತೇವೆ ಎಂದು ಎಸ್‌ಬಿಐ ಗ್ರಾಹಕರಿಗೆ ಭರವಸೆ ನೀಡಿದರು. ಈ ವೇಳೆ ಗ್ರಾಹಕರು ತಮ್ಮ ಅಳಲನ್ನು ಪೊಲೀಸರ ಎದುರು ಹೇಳಿಕೊಂಡರು.

ಈ ಸಂದರ್ಭದಲ್ಲಿ ಎಸ್‌ಬಿಐ ಅಧಿಕಾರಿಗಳು, ಪೊಲೀಸರು, ಗ್ರಾಹಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande