ಉತ್ತರಾಖಂಡನಲ್ಲಿ ಮೇಘಸ್ಫೋಟ ; ೧೦ ಮಂದಿ ಕಾಣೆ, ಇಬ್ಬರ ರಕ್ಷಣೆ
ಗೋಪೇಶ್ವರ, 18 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಉತ್ತರಾಖಂಡದ ಚಮೋಲಿ ಜಿಲ್ಲೆಯ ನಂದನಗರ ಘಾಟ್ ಪ್ರದೇಶದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಮೇಘಸ್ಫೋಟದಿಂದ ಹಾನಿಯಾಗಿದೆ. ಕುಂಟಾರಿ ಲಗಾ ಫಾಲಿ ವಾರ್ಡ್‌ನಲ್ಲಿ ಆರು ಮನೆಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದು, ಏಳು ಜನರು ಕಾಣೆಯಾಗಿದ್ದಾರೆ. ಇಬ್ಬರನ್ನ
ಉತ್ತರಾಖಂಡನಲ್ಲಿ ಮೇಘಸ್ಫೋಟ ; ೧೦ ಮಂದಿ ಕಾಣೆ, ಇಬ್ಬರ ರಕ್ಷಣೆ


ಗೋಪೇಶ್ವರ, 18 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಉತ್ತರಾಖಂಡದ ಚಮೋಲಿ ಜಿಲ್ಲೆಯ ನಂದನಗರ ಘಾಟ್ ಪ್ರದೇಶದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಮೇಘಸ್ಫೋಟದಿಂದ ಹಾನಿಯಾಗಿದೆ.

ಕುಂಟಾರಿ ಲಗಾ ಫಾಲಿ ವಾರ್ಡ್‌ನಲ್ಲಿ ಆರು ಮನೆಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದು, ಏಳು ಜನರು ಕಾಣೆಯಾಗಿದ್ದಾರೆ. ಇಬ್ಬರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಜಿಲ್ಲಾಧಿಕಾರಿ ಸಂದೀಪ್ ತಿವಾರಿ, ಕಾಣೆಯಾದವರಿಗಾಗಿ ಶೋಧ ಕಾರ್ಯಾಚರಣೆಗಳು ತೀವ್ರಗೊಳಿಸಲಾಗಿವೆ ಎಂದು ತಿಳಿಸಿದ್ದಾರೆ.

ಎಸ್‌ಡಿಆರ್‌ಎಫ್ ತಂಡ ನಂದಪ್ರಯಾಗ ತಲುಪಿದ್ದು, ಎನ್‌ಡಿಆರ್‌ಎಫ್ ಸಹಾಯಕ್ಕಾಗಿ ಗೋಚಾರ್‌ನಿಂದ ತೆರಳುತ್ತಿದೆ. ವೈದ್ಯಕೀಯ ತಂಡ ಹಾಗೂ ಆಂಬ್ಯುಲೆನ್ಸ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

ಗ್ರಾಮಸ್ಥರ ಪ್ರಕಾರ, ಭಾರೀ ಮಳೆಯಿಂದ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಈಗಾಗಲೇ ಹಲವು ಮನೆಗಳು ಹಾನಿಗೊಳಗಾಗಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande