ಬಳ್ಳಾರಿ, 08 ಜುಲೈ (ಹಿ.ಸ.) :
ಆ್ಯಂಕರ್ : ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು ಗ್ರಾಮೀಣ ಪ್ರತಿಭೆಗಳಾದ ಬಿ. ನವೀನ್ ಕುಮಾರ್ ಮತ್ತು ಶ್ರೀನಿವಾಸರೆಡ್ಡಿ ಅವರು ತೇರ್ಗಡೆಯಾಗಿದ್ದಾರೆ.
ಬಳ್ಳಾರಿ ತಾಲೂಕಿನ ಬಾಣಾಪುರ ಗ್ರಾಮದ ಸೀತಮ್ಮ ಮತ್ತು ಡಾ. ಬಿ. ಮಲ್ಲಿಕಾರ್ಜುನಗೌಡ ಅವರ ಪುತ್ರ ಬಿ. ನವೀನ್ ಕುಮಾರ್ ಮತ್ತು ದಮ್ಮೂರಿನ ಕಾಮಾಕ್ಷಮ್ಮ ಮತ್ತು ಗುಬ್ಬಿಹಾಳ್ ತಿಮ್ಮಾರೆಡ್ಡಿ ಅವರ ಪುತ್ರ ಶ್ರೀನಿವಾರೆಡ್ಡಿ ಅವರು ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್