ಬಳ್ಳಾರಿ, 09 ಜೂನ್ (ಹಿ.ಸ.) :
ಆ್ಯಂಕರ್ : ತುಂಗಭದ್ರಾ ಜಲಾಶಯದ 33 ಕ್ರಸ್ಟ್ಗೇಟುಗಳನ್ನು ಒಟ್ಟಿಗೇ ಬದಲಾವಣೆ ಮಾಡಿ, ಸಮರ್ಪಕವಾಗಿ ನೀರು ನಿರ್ವಹಣೆ ಮಾಡುವ ಮೂಲಕ ರೈತಪರವಾದ - ಕೃಷಿಸ್ನೇಹಿಯಾದ ನೀತಿಯನ್ನು ಪಾಲನೆ ಮಾಡಬೇಕು ಎಂದು ತುಂಗಭದ್ರ ರೈತ ಸಂಘ ಆಗ್ರಹಿಸಿದೆ.
ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರಷೋತ್ತಮಗೌಡ ಅವರು, ಜಿಲ್ಲಾಡಳಿತ, ತುಂಗಭದ್ರಾ ಮಂಡಲಿ, ರಾಜ್ಯ ಸರ್ಕಾರಕ್ಕೆ ಮತ್ತು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿ, ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟುಗಳು ಸವೆದಿದ್ದು, ಹೊಸ ಗೇಟ್ಗಳನ್ನು ಅಳವಡಿಸಲು ಗುಜರಾತ್ ಮೂಲಕ ಕಂಪನಿಗೆ ಟೆಂಡರ್ ನೀಡಲಾಗಿದೆ. ಕಾರಣ ಪ್ರಸ್ತುತ 19ನೇ ನಂಬರ್ನ ಕ್ರಸ್ಟ್ಗೇಟ್ ಅಳವಡಿಸುವ ಬದಲು ಎಲ್ಲಾ 33 ಕ್ರಸ್ಟ್ಗೇಟ್ಗಳನ್ನು ಒಟ್ಟಿಗೇ ಅಳವಡಿಸಬೇಕು ಎಂದು ಮನವಿ ಮಾಡಿದರು.
ತುಂಗಭದ್ರ ಜಯಲಾಶಯದಲ್ಲಿ 22 ಟಿಎಂಸಿ ಪ್ರಮಾಣದ ನೀರು ಪ್ರಸ್ತುತ ಸಂಗ್ರಹವಾಗಿದೆ. ಜಲಾಶಯಕ್ಕೆ ಒಳ ಹರಿವು ಉತ್ತಮವಾಗಿದೆ. ನೀರಾವರಿ ತಜ್ಞರ ಸಮಿತಿಯು ಜಲಾಶಯದ ರಕ್ಷಣೆಯ ಹಿನ್ನಲೆಯಲ್ಲಿ ಶೇ. 80 ರಷ್ಟು ನೀರನ್ನು ಮಾತ್ರ ಜಲಾಶಯದಲ್ಲಿ ಸಂಗ್ರಹ ಮಾಡಲು ಸಲಹೆ ನೀಡಿದೆ. ಕಾರಣ ಸರ್ಕಾರ ತಕ್ಷಣವೇ ಎಚ್ಚೆತ್ತು, ರೈತರಪರವಾದ - ಕೃಷಿಸ್ನೇಹಿಯಾಗಿ ಎಲ್ಲಾ 33 ಕ್ರಸ್ಟ್ಗೇಟ್ಗಳನ್ನು ಒಟ್ಟಿಗೇ ಅಳವಡಿಸುವ ಕೆಲಸವನ್ನು ಮಾಡಬೇಕು ಎಂದು ಕೋರಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್