ಗದಗ, 09 ಜೂನ್ (ಹಿ.ಸ.) :
ಆ್ಯಂಕರ್ : ವಿಶ್ವ ಕಲ್ಯಾಣ (ರಿ) ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ ಪ್ರೋಪೇಸರ್ ವಸಂತ ಐಹೊಳೆ ಹಾಗೂ ಕುಟುಂಬಸ್ಥರು ಟಿವಿ ದೇಣಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೋಪೇಸರ್ ವಸಂತ ಐಹೊಳೆ ಮಾತನಾಡಿ, ಅತ್ಯಂತ ಕಷ್ಟಕರವಾದ ಸೇವಾ ಕಾರ್ಯವನ್ನು ಈ ಸಂಸ್ಥೆಯು ಆಯ್ಕೆ ಮಾಡಿಕೊಂಡು ವಿಶೇಷ ಮಕ್ಕಳಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸಿ, ಅವರವರ ಸಾಮಥ್ರ್ಯಗೆ ತಕ್ಕಂತೆ ತರಬೇತಿ ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿರುವುದರೊಂದಿಗೆ ಸಂಸ್ಕಾರವನ್ನು ಕೂಡಾ ನೀಡುತ್ತಿರುವ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯವಾಗಿದೆ. ವಿಶೇಷ ಚೇತನರ ತರಬೇತಿಗೆ ಹಾಗೂ ಮನರಂಜನೆಗಾಗಿ ಟಿವಿ ದೇಣಿಗೆ ನೀಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವಾಗಿದೆ. ಶೀಘ್ರದಲ್ಲಿಯೇ ಡಿಸ್ಕ್ ಕೂಡ ಹಾಕಿಸಿಕೊಡುತ್ತೇನೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಮಂಜುನಾಥ ಹದ್ದಣ್ಣವರವರ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ, ವಿಶ್ವ ಕಲ್ಯಾಣ ಸಂಸ್ಥೆಯು ನಡೆದು ಬಂದ ದಾರಿಯನ್ನು ವಿವರಿಸುತ್ತಾ, ದಾನಿಗಳಿಂದ ನಡೆಸುತ್ತಿರುವ ಈ ಸೇವಾ ಕಾರ್ಯಕ್ಕೆ ಈಡೀ ಸಮಾಜದ ಸಹಭಾಗಿತ್ವ ಬಹಳ ಅವಶ್ಯವಿದ್ದು, ಇವರಿಗೆ ಸೂಕ್ತವಾದ ಅವಕಾಶಗಳನ್ನು ನೀಡಿ, ಇವರಲ್ಲಿರುವ ಸೂಪ್ತವಾದ ಕೌಶಲ್ಯಗಳನ್ನು ಹೊರತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ವಸಂತ ಐಹೊಳೆ ಹಾಗೂ ಕುಟುಂಬಸ್ಥರು ಟಿ.ವ್ಹಿ ದೇಣಿಗೆ ನೀಡುವುದರ ಮೂಲಕ ವಿಶೇಷ ಮಕ್ಕಳಿಗೆ ಮಹತ್ವಪೂರ್ಣ ಸೇವೆಯನ್ನು ಸಲ್ಲಿಸಿದ್ದಾರೆ ಇವರಿಗೂ ಹಾಗೂ ಇವರ ಸಹ ಕುಟುಂಬಕ್ಕೆ ಭಗವಂತ ಆಯುರಆರೋಗ್ಯ ನೀಡಿ, ಸಕಲ ಇಷ್ಠಾರ್ಥ ಸಿದ್ಧಿಯಾಗಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಕಾಶ ಕೆಳಗೇರಿ, ಶಾಂತಮ್ಮಾ ಹೂಗಾರ, ವಿಶೇಷ ಚೇತನರು, ಪಾಲಕರು, ಹಾಗೂ ವಿಶೇಷ ಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP