ಹಲವು ಆರೋಗ್ಯ ಸಮಸ್ಯೆಗಳಗೆ ಯೋಗದಿಂದ ಪರಿಹಾರ
ಹಲವು ಆರೋಗ್ಯ ಸಮಸ್ಯೆಗಳಗೆ ಯೋಗದಿಂದ ಪರಿಹಾರ
ಈನೆಲ ಈಜಲ ಸಂಸ್ಥೆಯ ಆಶ್ರಯದಲ್ಲಿ ಕೋಲಾರದಲ್ಲಿ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನಡೆಸಿದರು.


ಕೋಲಾರ, ಜೂನ್ ೨೧ (ಹಿ.ಸ) :

ಆ್ಯಂಕರ್ : ಯೋಗದಿಂದ ರಕ್ತಪರಿಚಲನೆ ಸುಧಾರಿಸುತ್ತದೆ. ಇದು ಹೃದಯದ ಆರೋಗ್ಯಕ್ಕೆ ಸಹಕಾರಿ. ಬೆನ್ನುನೋವು, ಕೀಲುನೋವು, ಮತ್ತು ದೀರ್ಘಕಾಲದ ನೋವುಗಳನ್ನು ಕಡಿಮೆ ಮಾಡಲು ಯೋಗ ಸಹಾಯ ಮಾಡುತ್ತದೆ. ಕಟಿಚಕ್ರಾಸನವು ಬೆನ್ನಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಯೋಗಾಭ್ಯಾಸವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಇದರಿಂದ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಗಟ್ಟಿಯಾಗುತ್ತದೆ. ಯೋಗದಿಂದ ರೋಗ ದೂರವಾಗುತ್ತದೆ ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಎನ್. ಯೋಗ ನಾಗರಾಜ ತಿಳಿಸಿದರು.

ಭಾರತ ಸರ್ಕಾರ ಮೈ ಭಾರತ್ ಹಾಗು ಯವಜನ ವ್ಯವಹಾರ ಸಚಿವಾಲಯ, ಕೋಲಾರ ಮತ್ತು ಈ ನೆಲ ಈ ಜಲ ಕಲೆ ಮತ್ತು ಸಾಂಸ್ಕತಿಕ ಸಂಸ್ಥೆ ಸಹಯೋಗದಲ್ಲಿ ಕೋಲಾರ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಯೋಗ ದಿನಾಚರಣೆಯನ್ನ ಉದ್ಘಾಟಿಸಿ ಮಾತನಾಡಿದರು.

ಯೋಗದಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಯೋಗವು ಏಕಾಗ್ರತೆ, ಗಮನ ಮತ್ತು ಮಾನಸಿಕ ಸ್ಪಷ್ಟತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗಾಸನಗಳು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕೆಲವು ಯೋಗಾಸನಗಳು ಮತ್ತು ಪ್ರಾಣಾಯಾಮಗಳು ವಿಶೇಷವಾಗಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಪದ್ಮಾಸನ, ಸರ್ವಾಂಗಾಸನ, ಪಶ್ಚಿಮೋತ್ತಾನಾಸನ ಮತ್ತು ಹಲಾಸನ ಮುಂತಾದ ಯೋಗಾಸನಗಳು ಏಕಾಗ್ರತೆ, ಒತ್ತಡ ಕಡಿಮೆ ಮಾಡುವುದು ಮತ್ತು ಮೆದುಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಜ್ಞಾಪಕ ಶಕ್ತಿ ಮತ್ತು ಮಾನಸಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಪ್ರಾಣಾಯಾಮದಂತಹ ಧ್ಯಾನ ತಂತ್ರಗಳು ಮನಸ್ಸನ್ನು ಶಾಂತಗೊಳಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಅಂತಿಮವಾಗಿ ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುತ್ತದೆ ಎಂದು ತಿಳಿಸಿದರು.

ಜನಪದ ಗಾಯಕ ಈ ನೆಲ ಈ ಜಲ ವೆಂಕಟಾಚಲಪತಿ.ಬಿ, ಗಣೇಶಪ್ಪ ಎನ್ ರವರು ನಾಡಗೀತೆಯನ್ನು ಹಾಡಿದರು

ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪರಶುಮ್ ಎನ್.ಉಂಕಿ, ಉಪನ್ಯಾಸಕರಾದ ರತ್ನಪ್ಪ, ಶ್ರೀನಾಥ ಡಿ ಸಿ, ಆನಂದ್ ಕುಮಾರ್, ಸವಿತ ಎನ್, ಪಾರ್ವತಮ್ಮ, ಮಂಜುಳ.ಎ, ಭಾರತಿ, ನೇತ್ರಾವತಿ ಭಾಗವಹಿಸಿದ್ದರು.

ಚಿತ್ರ : ಈನೆಲ ಈಜಲ ಸಂಸ್ಥೆಯ ಆಶ್ರಯದಲ್ಲಿ ಕೋಲಾರದಲ್ಲಿ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande