ಬೆಂಗಳೂರು, 21 ಜೂನ್ (ಹಿ.ಸ.) :
ಆ್ಯಂಕರ್ : ಮೈಸೂರಿನ ಪ್ರತೀ ಮನೆಗಳಿಗೂ ಯೋಗದ ಸ್ಪರ್ಶ ನೀಡುವ ಮೂಲಕ 'ಯೋಗ ಜಿಲ್ಲೆ'ಯನ್ನಾಗಿಸುವ ಸಂಕಲ್ಪ ಹೊಂದಲಾಗಿದೆ ಎಂದು ಸಚಿವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಆಯುಷ್ ಇಲಾಖೆಯ ವತಿಯಿಂದ ವಿಧಾನ ಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯೋಗದಲ್ಲಿ ವಿಶ್ವ ಪ್ರಖ್ಯಾತವಾದ ಸ್ಥಳ ಮೈಸೂರು ಜಿಲ್ಲೆ. ಆದ್ದರಿಂದ ಮೈಸೂರಿನ ಪ್ರತಿ ಮನೆಗಳಿಗೂ ಯೋಗಾಭ್ಯಾಸದ ಕುರಿತು ಅರಿವು ಮೂಡಿಸುವ ಮೂಲಕ ಯೋಗ ಜಿಲ್ಲೆಯಾಗಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa