ಅಡವಿಸೋಮಾಪೂರ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರ ಚಾಲನೆ
ಗದಗ, 21 ಜೂನ್ (ಹಿ.ಸ.) : ಆ್ಯಂಕರ್ : ನರಗುಂದ ಶಾಸಕರು, ಮಾಜಿ ಸಚಿವ ಸಿ.ಸಿ.ಪಾಟೀಲ ಅವರು ನರಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗದಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 587.82 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇವುಗಳಲ್ಲಿ ಕೆಲವು ಕಾಮಗಾರಿಗಳು ಲೋಕಾರ್ಪಣೆಗೊಂಡರೆ, ಇ
ಪೋಟೋ


ಗದಗ, 21 ಜೂನ್ (ಹಿ.ಸ.) :

ಆ್ಯಂಕರ್ : ನರಗುಂದ ಶಾಸಕರು, ಮಾಜಿ ಸಚಿವ ಸಿ.ಸಿ.ಪಾಟೀಲ ಅವರು ನರಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗದಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 587.82 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಇವುಗಳಲ್ಲಿ ಕೆಲವು ಕಾಮಗಾರಿಗಳು ಲೋಕಾರ್ಪಣೆಗೊಂಡರೆ, ಇನ್ನು ಕೆಲವು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಅಡವಿಸೋಮಾಪೂರ ದೊಡ್ಡ ತಾಂಡಾದಲ್ಲಿ 46.92 ಲಕ್ಷದ ಕಾಮಗಾರಿಗಳು

ಗದಗ ತಾಲೂಕಿನ ಅಡವಿಸೋಮಾಪೂರ ದೊಡ್ಡ ತಾಂಡಾದಲ್ಲಿ ಒಟ್ಟು ₹18.92 ಲಕ್ಷ ವೆಚ್ಚದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾದ ಅಂಗನವಾಡಿ ಕೇಂದ್ರ ಸಂಖ್ಯೆ-49 12 ಲಕ್ಷ ಮತ್ತು ಅಂಗನವಾಡಿ ಕೇಂದ್ರ ಸಂಖ್ಯೆ-47 4.50 ಲಕ್ಷ, ಶಿಕ್ಷಣ ಇಲಾಖೆಯ ಅಡಿಯಲ್ಲಿ ದೊಡ್ಡ ತಾಂಡಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಮಾರ್ಟ್‌ ಕ್ಲಾಸ್ 2.42 ಲಕ್ಷ ಇವುಗಳನ್ನು ಲೋಕಾರ್ಪಣೆಗೊಳಿಸಿದರು. ಇದೇ ಗ್ರಾಮದಲ್ಲಿ ಒಟ್ಟು 28. ಲಕ್ಷ ವೆಚ್ಚದ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿ 18 ಲಕ್ಷ ಮತ್ತು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿಯಲ್ಲಿ ಶ್ರೀ ಸೇವಾಲಾಲ್ ದೇವಸ್ಥಾನ ಅಭಿವೃದ್ಧಿ ಕಾಮಗಾರಿ 5.ಲಕ್ಷ ಹಾಗೂ ಶ್ರೀ ಬಂಡೆಮ್ಮದೇವಿ ಸಮುದಾಯ ಭವನ ನಿರ್ಮಾಣ ಕಾಮಗಾರಿ 5ಲಕ್ಷ ಇವುಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಪಾಪನಾಶಿ ಗ್ರಾಮದಲ್ಲಿ 28 ಲಕ್ಷದ ಕಾಮಗಾರಿಗಳು

ಪಾಪನಾಶಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ನರೇಗಾ ಸಹಯೋಗ) ವತಿಯಿಂದ ನಿರ್ಮಿಸಲಾದ ಅಂಗನವಾಡಿ ಕೇಂದ್ರ ಸಂಖ್ಯೆ-277 ರ ಕಟ್ಟಡವನ್ನು (23ಲಕ್ಷ) ಉದ್ಘಾಟಿಸಲಾಯಿತು. ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿಯಲ್ಲಿ ಶ್ರೀ ಬಾವಿ ಬಸವೇಶ್ವರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ (5ಲಕ್ಷ) ಭೂಮಿಪೂಜೆ ನೆರವೇರಿಸಿದರು.

ಅಡವಿಸೋಮಾಪೂರ ಗ್ರಾಮದಲ್ಲಿ 45.80 ಲಕ್ಷದ ಕಾಮಗಾರಿಗಳು ಅಡವಿಸೋಮಾಪೂರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 45.80 ಲಕ್ಷ ವೆಚ್ಚದಲ್ಲಿ, ಶಿಕ್ಷಣ ಇಲಾಖೆಯ ವಿಶೇಷ ಅನುದಾನದಡಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ಎರಡು ಕೊಠಡಿಗಳು (27.80 ಲಕ್ಷ) ಹಾಗೂ ಶಿಕ್ಷಣ ಇಲಾಖೆ (ಪಿ.ಆರ್.ಇ.ಡಿ.) ವತಿಯಿಂದ ನಿರ್ಮಿಸಲಾದ ಎರಡು ಕೊಠಡಿಗಳು (18.00 ಲಕ್ಷ) ಉದ್ಘಾಟಿಸಿದರು.

ಹೊಂಬಳ ಗ್ರಾಮದಲ್ಲಿ 471.10 ಲಕ್ಷದ ಕಾಮಗಾರಿಗಳು ಹೊಂಬಳ ಗ್ರಾಮದಲ್ಲಿ ಒಟ್ಟು 53.10 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ಸರ್ಕಾರಿ ಮಾದರಿಯ ಪ್ರಾಥಮಿಕ (ಎಂ.ಕೆ.ಬಿ.ಎಸ್) ಶಾಲೆಯ ನೂತನ ಕೊಠಡಿಗಳು 25.30 ಲಕ್ಷ ಮತ್ತು ವಿವೇಕ ಯೋಜನೆಯಡಿ ನಿರ್ಮಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಎಂ.ಕೆ.ಬಿ.ಎಸ್ ಶಾಲೆಯ ಒಂದು ಕೊಠಡಿ 13.90 ಲಕ್ಷ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಒಂದು ಕೊಠಡಿ 13.90 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾಮಗಾರಿಗಳು ಉದ್ಘಾಟನೆಗೊಂಡವು.

ಇದೇ ಗ್ರಾಮದಲ್ಲಿ ಒಟ್ಟು 418 ಲಕ್ಷ ವೆಚ್ಚದ ನಾಲ್ಕು ಪ್ರಮುಖ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಬಾರ್ಡ್ ಆರ್.ಐ.ಡಿ.ಎಫ್ ವತಿಯಿಂದ ಅತಿ ದೊಡ್ಡ ಯೋಜನೆಯಾದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ (395 ಲಕ್ಷ) ಚಾಲನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸಿ.ಸಿ. ಚರಂಡಿ, ಸಿ.ಡಿ ನಿರ್ಮಾಣ ಕಾಮಗಾರಿಗೆ (8ಲಕ್ಷ) ಭೂಮಿಪೂಜೆ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಶ್ರೀ ಹೊನ್ನಕೇರಿಮಲ್ಲಯ್ಯ ಸಮುದಾಯ ಭವನ ನಿರ್ಮಾಣ ಕಾಮಗಾರಿ 10 ಲಕ್ಷದಲ್ಲಿ ಹಾಗೂ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಹರಣಸಿಕಾರಿ ಜನಾಂಗದ ಸಮುದಾಯ ಭವನ ನಿರ್ಮಾಣ 5 ಲಕ್ಷದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

ಈ ಎಲ್ಲ ಯೋಜನೆಗಳು ನರಗುಂದ ವಿಧಾನಸಭಾ ಕ್ಷೇತ್ರದ ಶೈಕ್ಷಣಿಕ, ಸಾಮಾಜಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಲಿವೆ ಎಂದು ಸಿ.ಸಿ. ಪಾಟೀಲ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಹಿರಿಯರು, ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಧಿಕಾರಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande