ಗದಗ ಜಿಲ್ಲೆ ಬಿಜೆಪಿ ಯುವ ಮೋರ್ಚಾದಿಂದ ಯೋಗ ದಿನಚಾರಣೆ
ಗದಗ, 21 ಜೂನ್ (ಹಿ.ಸ.) : ಆ್ಯಂಕರ್ : ಪ್ರಧಾನಿಗಳಾದ ನರೇಂದ್ರ ಮೋದಿಜಿಯವರ ಯಶಸ್ವಿ 11 ವರ್ಷಗಳನ್ನು ಪೂರ್ತಿ ಗೊಳಿಸಿದ್ದಕ್ಕೆ ಹಾಗೂ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ಯೋಗ ಶಿಬಿರವನ್ನು ಮಲಸಮುದ್ರ ಗುಡ್ಡ ಆಯೋಜನೆ ‌ಮಾಡಲಾಗಿದೆ. ಯೋಗ ದಿನಾಚರಣೆ ನಿಮಿತ್ಯ
ಪೋಟೋ


ಗದಗ, 21 ಜೂನ್ (ಹಿ.ಸ.) :

ಆ್ಯಂಕರ್ : ಪ್ರಧಾನಿಗಳಾದ ನರೇಂದ್ರ ಮೋದಿಜಿಯವರ ಯಶಸ್ವಿ 11 ವರ್ಷಗಳನ್ನು ಪೂರ್ತಿ ಗೊಳಿಸಿದ್ದಕ್ಕೆ ಹಾಗೂ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ಯೋಗ ಶಿಬಿರವನ್ನು ಮಲಸಮುದ್ರ ಗುಡ್ಡ ಆಯೋಜನೆ ‌ಮಾಡಲಾಗಿದೆ.

ಯೋಗ ದಿನಾಚರಣೆ ನಿಮಿತ್ಯ ಮಲಸಮುದ್ರ ಗುಡ್ಡ ಓಂಕಾರೇಶ್ವರ ಮಠದ ಹತ್ತಿರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀ ಸಂತೋಷ ಅಕ್ಕಿಯವರ ನೇತೃತ್ವದಲ್ಲಿ ಯೋಗ ಅಭ್ಯಾಸ, ಸ್ವಚ್ಛತೆ, ಸಸಿ ನೆಟ್ಟು ಹಾಗು ಹನುಮಾನ್ ಚಾಲೀಸವನ್ನು ಪಠಿಸಿ ಆಚರಿಸಲಾಯಿತು.

ಯೋಗ ಶಿಬಿರವನ್ನು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಗದಗ ಬೆಟಗೇರಿ ಶಾಖೆಯ ಶ್ರೀ ಶಂಕರ ಖಾಕಿ ಯೋಗ ಗುರುಗಳ ಮಾರ್ಗದರ್ಶನದಲ್ಲಿ ಜರುಗಿತು. ಜಿಲ್ಲಾಧ್ಯಕ್ಷರಾದ ಶ್ರೀ ರಾಜು ಕುರಡಗಿ ಉಪಸ್ಥಿತಿಯಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಭೂದಪ್ಪ ಹಳ್ಳಿ, ಜಗನ್ನಾಥಸಾ ಭಾಂಡಗೆ, ವೈ ಪಿ ಅಡ್ನೂರ, ಅನಿಲ ಅಬ್ಬಿಗೇರಿ, ಭದ್ರೇಶ ಕುಸಲಾಪುರ, ಕಿಶನ್ ಮೆರವಾಡೆ, ರಮೇಶ ಸಜ್ಜಗಾರ, ಮಂಜುನಾಥ ಶಾಂತಗೇರಿ, ಯುವ ಮೋರ್ಚಾ ಜಿಲ್ಲಾ ತಂಡದ ಉಪಾಧ್ಯಕ್ಷ ಸುರೇಶ ಚವಾಣ್, ಸದಸ್ಯ ಸಚಿನ್ ಮಡಿವಾಳರ, ಸದಸ್ಯ ಹನುಮಂತ ಗೋಡ್ಕೆ, ಯುವ ಮೋರ್ಚಾ ಗದಗ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ನರೇಗಲ್, ಸದಸ್ಯ ಶಶಿಧರಗೌಡ ಕಳ್ಳಿ, ಸದಸ್ಯ ವಿನಾಯಕ ಹೊರಕೇರಿ, ಸದಸ್ಯ ಸಾಗರ ಪಾಪನಾಳ, ಯುವ ಮೋರ್ಚಾ ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಅರವಿಂದ ಅಣ್ಣಿಗೇರಿ,ಗದಗ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಕಾಳು ತೋಟದ, ಶಿವಾನಂದ ಅಕ್ಕಿ, ಮಲ್ಲಪ್ಪ ಕಣ್ಣೂರು, ಮದೇವಪ್ಪ ಹಡಪದ, ಬಸವರಾಜ್ ಚವಾಣ್, ನಾಗರಾಜ ಮಡ್ನೂರ್, ಮುಂತಾದ ಹಲವಾರು ಕಾರ್ಯಕರ್ತರು, ಯುವಕರು, ಯುವತಿಯರು ಆಗಮಿಸಿ ದಿನಾಚರಣೆಯನ್ನು ಪಾಲ್ಗೊಂಡು ಯಶಸ್ವಿಗೊಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande