ಸಿವಾನ್, 20 ಜೂನ್ (ಹಿ.ಸ.) :
ಆ್ಯಂಕರ್ : ಬಿಹಾರದಲ್ಲಿ ಅಭಿವೃದ್ಧಿಯ ಮಾರ್ಗದ ಮೇಲೆ ವೇಗವಾಗಿ ಸಾಗುತ್ತಿರುವ ಸಂದರ್ಭದಲ್ಲಿ, ಅದಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿರುವ ರಾಜಕೀಯ ಶಕ್ತಿಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿವಾನ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, “ಒಮ್ಮೆ ‘ಜಂಗಲ್ ರಾಜ್’ ತಂದವರು ಈಗ ಮತ್ತೆ ತಮ್ಮ ಹಳೆಯ ಶೈಲಿಯನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಉದ್ದೇಶ ಬಿಹಾರದ ಆರ್ಥಿಕ ಸಂಪತ್ತು ಲೂಟಿ ಮಾಡುವುದಾಗಿದೆ, ಎಂದು ಕಿಡಿಕಾರಿದರು.
ಆರ್ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ನೇರವಾಗಿ ಗುರಿಯಾಗಿಸಿಕೊಂಡು ಮಾತನಾಡಿದ ಅವರು,“ಪಂಜ ಮತ್ತು ಲಾಟೀನಿನ ಜನರು ಬಿಹಾರವನ್ನು ಶೋಷಣೆಗೊಳಪಡಿಸಿದರು. ಬಡತನ ಬಿಹಾರದ ಗುರುತಾಗಿಬಿಟ್ಟಿತ್ತು. ಆದರೆ ಈಗ ಬಿಹಾರ ಬದಲಾಗುತ್ತಿದೆ,” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa