ರಾಯಚೂರು, 19 ಜೂನ್ (ಹಿ.ಸ.) :
ಆ್ಯಂಕರ್ : ನಗರದ ಪ್ರಧಾನ ಅಂಚೆ ಕಚೇರಿಯಿಂದ ಐಟಿ 2.0 ಅಡಿಯಲ್ಲಿ ಹೊಸ ತಂತ್ರಾಂಶವನ್ನು ಅಳವಡಿಸುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ಪ್ರಧಾನ ಅಂಚೆ ಕಚೇರಿ ಮತ್ತು ಅದರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪ ಅಂಚೆ ಕಚೇರಿಗಳಲ್ಲಿ ಜೂನ್ 21 ರಂದು ಯಾವುದೇ ರೀತಿಯ ವಹಿವಾಟು ಇರುವುದಿಲ್ಲವೆಂದು ರಾಯಚೂರು ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಶಿವಾನಂದ ಆರ್.ಹೆಚ್ ಅವರು ತಿಳಿಸಿದ್ದಾರೆ.
ಈ ಕುರಿತು ರಾಯಚೂರು ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ರಾಯಚೂರು ಪ್ರಧಾನ ಅಂಚೆ ಕಚೇರಿ, ಮುಕ್ರಮ್ ಗಂಜ್, ಜವಾಹರನಗರ, ನಯಾ ಬಜಾರ್, ರಾಯಚೂರು ಸಾತ್ ಕಚೇರಿ, ರಾಯಚೂರು ಆರ್ ಎಸ್., ರಾಯಚೂರು ಯುಎಎಸ್, ಮಾನವಿ, ಸಿಂಧನೂರು, ಲಿಂಗಸಗೂರು, ಸಿರವಾರ, ಮಸ್ಕಿ, ದೇವದುರ್ಗ, ಜಾಲಹಳ್ಳಿ ಗಬ್ಬೂರ್, ಕಲ್ಮಲಾ, ಕಲ್ಲೂರು, ಕುರ್ಡಿ, ಮಟಮಾರಿ, ಯರಗೇರಾ, ಶಕ್ತಿನಗರ, ಯರಮರಸ್, ಯರಮರಸ್ ಕ್ಯಾಂಪ್, ದಡೇಸುಗೂರು, ತುರ್ವಿಹಳ, ಜವಳಗೆರಾ, ಹಟ್ಟಿ, ಕವಿತಾಳ, ರೊಡಲಬಂಡ, ಗುರುಗುಂಟಾ, ಲಿಂಗಸುಗೂರು ಕಚೇರಿ, ಸಿಂಧನೂರು ಕೋರ್ಟ್ ಕಚೇರಿ, ಗಬ್ಬೂರು, ಗುಂಜಹಳ್ಳಿ ಸೇರಿ 36 ಅಂಚೆ ಕಚೇರಿಗಳು ಹಾಗೂ ಅವುಗಳ ವ್ಯಾಪ್ತಿಯಲ್ಲಿ ಬರುವ ಶಾಖ ಅಂಚೆ ಕಚೇರಿಗಳಲ್ಲಿ ಜೂನ್ 21 ರಂದು ಯಾವುದೇ ವ್ಯವಹಾರ ವಹಿವಾಟು ಇರುವುದಿಲ್ಲ, ಆದ್ದರಿಂದ ಅಂಚೆ ಕಚೇರಿಯ ಗ್ರಾಹಕರು ಸಹಕರಿಸಬೇಕಾಗಿ, ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಳ್ಳಲಾಗಿದೆ ಎಂದು ರಾಯಚೂರು ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್