ಕಲಬುರಗಿ, 16 ಜೂನ್ (ಹಿ.ಸ.) :
ಆ್ಯಂಕರ್ : ಕಲಬುರಗಿ ನಗರದ ಹೊರವಲಯದ ಗೀತಾ ನಗರದಲ್ಲಿ ರಾಜಯೋಗ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕಲಬುರಗಿ ಉಪವಲಯ ಆಯೋಜಿಸಿದ್ದ ಶಾಂತಿ, ಒಗ್ಗಟ್ಟು ಮತ್ತು ನಂಬಿಕೆ ಉತ್ತೇಜಿಸುವಲ್ಲಿ ಮಾಧ್ಯಮಗಳ ಪಾತ್ರ ಕುರಿತ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದಲ್ಲಿ ಭಾಗಿಯಾದ ಬಿಕೆ ಪ್ರೇಮಣ್ಣ, ಬಿಕೆ ವಿಜಯಾ ಅಕ್ಕ, ಬಿಕೆ ಶಾಂತನು, ಬಿಕೆ ಸರಳಾ ಅಕ್ಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹೈದರಾಬಾದ್ನ ಸರಳಾ ಅಕ್ಕ ಮೌಂಟ್ ಅಬುದ ರಾಷ್ಟ್ರೀಯ ಸಂಯೋಜಕ ಬಿಕೆ ಶಾಂತನು ಭಾಯ್ ಅವರು, ಪ್ರಭಾವಶಾಲಿಯಾದ ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ಮಾಧ್ಯಮಕ್ಕೆ ಗೌರವ ಮತ್ತು ಗುರುತರವಾದ ಜವಾಬ್ದಾರಿ ಇದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಭಾಗಿಯಾದ ಹಿರಿಯ ಪತ್ರಕರ್ತರು, ಉತ್ತರ ಕರ್ನಾಟಕ ಪತ್ರಿಕೆಯ ಸಂಸ್ಥಾಪಕರಾದ ಶಿವಶರಣಪ್ಪ ವಾಲಿ ಅವರು ಮಾತನಾಡಿ, ದೇಶದ ಮಾಧ್ಯಮ ಕ್ಷೇತ್ರದಲ್ಲಿರುವ ಪಾಶ್ಚಿಮಾತ್ಯ ಪತ್ರಿಕೋದ್ಯಮ ಸಂಸ್ಕೃತಿ ಹೋಗಿ ಭಾರತೀಯ ಮೌಲ್ಯ ಆಧಾರಿತ ಸಂಸ್ಕೃತಿ ಬರಬೇಕಿದೆ ಎಂದರು. ಮಾಧ್ಯಮಗಳು ಒಗ್ಗೂಡಿ ಧ್ವನಿ ಎತ್ತಿದರೆ ಸರಕಾರವೂ ಕೇಳುತ್ತದೆ. ಯಾರು ಮಾಡಲು ಆಗದನ್ನು ಮಾಧ್ಯಮಗಳನ್ನು ಮಾಡುತ್ತಿವೆ. ಹೀಗಾಗಿ, ಮಾಧ್ಯಮ ಕ್ಷೇತ್ರದಲ್ಲಿ ಧಾರ್ಮಿಕ ಸಾಮರಸ್ಯ, ರಾಷ್ಟ್ರೀಯತೆ, ಏಕತೆ ಮತ್ತು ಸಮಗ್ರತೆಯನ್ನು ಉತ್ತೇಜಿಸಬೇಕು. ಮಾಧ್ಯಮಗಳಲ್ಲಿ ನುಸುಳುತ್ತಿರುವ ತಪ್ಪು ಮಾಹಿತಿ, ಹುಸಿ ಸುದ್ದಿ, ಭಾವೋದ್ರೇಕವನ್ನು ತೊಡೆದು ಹಾಕಬೇಕು ಎಂದು ಸಲಹೆ ನೀಡಿದರು.
ಇನ್ನು ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು, ಉತ್ತರ ಕರ್ನಾಟಕ ಪತ್ರಿಕೆಯ ಸಂಸ್ಥಾಪಕರಾದ ಶಿವಶರಣಪ್ಪ ವಾಲಿ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜಯೋಗಿನಿ ಬಿ.ಕೆ.ವಿಜಯಾ ದೀದಿ, ಪ್ರೇಮ ಅಣ್ಣಾ, ಬಿ.ಕೆ.ಮಂಜು ಬೆಹನ್, ಬಿಕೆ ರಾಗಿನಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಭವಾನಿಸಿಂಗ್ ಠಾಕೂರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Samarth biral