ಜಾನಪದ ಸಾವಿಲ್ಲದ ಸಾಂಸ್ಕೃತಿಕತೆ
ಬಳ್ಳಾರಿ, 16 ಜೂನ್ (ಹಿ.ಸ.) : ಆ್ಯಂಕರ್ : ಜಾನಪದ ಸಾವಿಲ್ಲದ ಸಾಂಸ್ಕೃತಿಕತೆಯನ್ನು ಹೊಂದಿದೆ ಎಂದು ಇತಿಹಾಸ ಅಕಾಡೆಮಿಯ ಅಧ್ಯಕ್ಷ ಟಿ.ಹೆಚ್.ಎಂ. ಬಸವರಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪಂಚಾಯತಿ ಕಚೇರಿಯ ರಸ್ತೆಯಲ್ಲಿರುವ ಬುದ್ಧವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖ
ಜಾನಪದ ಸಾವಿಲ್ಲದ ಸಾಂಸ್ಕøತಿಕತೆ


ಬಳ್ಳಾರಿ, 16 ಜೂನ್ (ಹಿ.ಸ.) :

ಆ್ಯಂಕರ್ : ಜಾನಪದ ಸಾವಿಲ್ಲದ ಸಾಂಸ್ಕೃತಿಕತೆಯನ್ನು ಹೊಂದಿದೆ ಎಂದು ಇತಿಹಾಸ ಅಕಾಡೆಮಿಯ ಅಧ್ಯಕ್ಷ ಟಿ.ಹೆಚ್.ಎಂ. ಬಸವರಾಜ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪಂಚಾಯತಿ ಕಚೇರಿಯ ರಸ್ತೆಯಲ್ಲಿರುವ ಬುದ್ಧವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಹೊಸ ಎರಗುಡಿಯ ಅಕ್ಷಯ ಕಲಾ ಟ್ರಸ್ಟ್ ಏರ್ಪಡಿಸಲಾಗಿದ್ದ `ಮುಂಗಾರು ಜಾನಪದ ಸಂಭ್ರಮ'ದ ಅತಿಥಿಗಳಾಗಿ ಅವರು ಮಾತನಾಡಿದರು.

ಹಳ್ಳಿಗಳಲ್ಲಿ ತಳ ಸಮುದಾಯದಿಂದ ಮೂಡಿರುವ ಸಾಹಿತ್ಯ ಜಾನಪದ ಸಾಹಿತ್ಯವಾಗಿದ್ದು, ಕಲೆ ಜಾನಪದ ಕಲೆಯಾಗಿದೆ. ಈ ನಿಟ್ಟಿನಲ್ಲಿ ನಶಿಸುತ್ತಿರುವ - ಆಕರ್ಷಣೆಯ ವಿಷಯವಾಗುತ್ತಿರುವ ಜಾನಪದವನ್ನು ಪೋಷಿಸಿ - ಪ್ರೋತ್ಸಾಹಿಸಲು ಅಕ್ಷಯ ಕಲಾ ಟ್ರಸ್ಟ್ ಮುಂದಾಗಿರುವುದು ಶ್ಲಾಘನೀಯ ಎಂದರು.

ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಪಾರ್ಕ್‍ನಲ್ಲಿ ಬುದ್ಧನ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು ಸ್ವಾಗತಾರ್ಹ ಎಂದರು.

ಡಾ. ಬಾಬು ಜಗಜೀವನರಾಂ ಲಿಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ, ಬುದ್ಧನ ತತ್ವಗಳನ್ನು, ಬಸವಣ್ಣನವರ ವಚನಗಳನ್ನು, ಅಂಬೇಡ್ಕರ್ ಅವರ ಸಂವಿಧಾನವನ್ನು ವಿವರಿಸಿದರು.

ಅಕ್ಷಯ ಕಲಾ ಟ್ರಸ್ಟ್‍ನ ಅಧ್ಯಕ್ಷ ಎಚ್.ಜಿ. ಸುಂಕಪ್ಪ ಅವರು ಸ್ವಾಗತಿಸಿ ವಂದಿಸಿದರು. ಕಲಾವಿದರಾದ ಆನಂದ್ ಕಲ್ಲುಕಂಭ, ವಿಜಯ್ ಪ್ಯಾಡ್ ವಾದಕರು, ಹೇಮಂತ್ ಜಂಬೆ ವಾದಕರು ಲೋಕೇಶ್ ತಿಮ್ಮರಾಜ್ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande