ಬಳ್ಳಾರಿ, 15 ಜೂನ್ (ಹಿ.ಸ.) :
ಆ್ಯಂಕರ್ : ದೇಶಕ್ಕೆ ಕೀರ್ತಿ ತಂದಿರುವ ಹಾಡುವ ಹಕ್ಕಿ ಡಾ. ಬಾನಂದೂರು ಕೆಂಪಯ್ಯ ಅವರ ಹುಟ್ಟು ಹಬ್ಬವನ್ನು ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ ಹಾಗೂ ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯು ಕಾಕರ್ಲತೋಟದ ಅಲೆಮಾರಿಗಳ ಕಾಲೋನಿಯ ಹಂಡಿಜೋಗಿಗಳ ಕಾಲೋನಿಯಲ್ಲಿ ಆಚರಿಸಲಾಯಿತು.
ನಂತರ ಮಾತನಾಡಿದ ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು ಜಾನಪದ ಗಾಯನದ ಮೂಲಕ ನಾಡಿಗೆ ದೇಶಕ್ಕೆ ಕೀರ್ತಿ ತಂದಿರುವ ಡಾ. ಬಾನಂದೂರು ಕೆಂಪಯ್ಯ ಅವರು ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಗಳಲ್ಲಿ ಒಬ್ಬರಾಗಿರುವುದು ನಮಗೆ ಸಂತಸದ ವಿಷಯ. ಅವರ 75ನೇ ಹುಟ್ಟುಹಬ್ಬವನ್ನು ನಮ್ಮ ವೇದಿಕೆಯು ಆಚರಿಸುತ್ತಿರುವುದು ಹೆಮ್ಮೆ ತಂದಿದೆ ಎಂದರು.
ಡಾ. ಬಾನಂದೂರು ಕೆಂಪಯ್ಯ ಅವರು ಎರಡು ಬಾರಿ ಅಮೆರಿಕಾ, ಒಂದು ಬಾರಿ ಇಂಗ್ಲೆಂಡ್ ಹಾಗೂ ದೇಶದ ರಾಜಧಾನಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ನಾಡಿನ ಶ್ರೀಮಂತ ಜಾನಪದ ಪರಂಪರೆಯನ್ನು ದೇಶ ವಿದೇಶಗಳಲ್ಲಿ ಪರಿಚಯಿಸಿದ್ದಾರೆ ಎಂದು ಹೇಳಿದರು.
ಸಾಹಿತ್ಯ-ಸಂಗೀತಕ್ಕೂ ಅನುಪಮ ಕೊಡುಗೆ ನೀಡಿರುವ ಡಾ. ಬಾನಂದೂರು ಅವರ ಕಲಾ ಪ್ರತಿಭೆಯನ್ನು ಗೌರವಿಸಿ ರಾಜ್ಯ, ಕೇಂದ್ರ ಸರಕಾರಗಳು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ನೀಡಿ ಸತ್ಕರಿಸಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಅಶ್ವ ರಾಮು ಅವರು ಮಾತನಾಡಿ, ಪ್ರಸಿದ್ಧ ಜಾನಪದ ಗಾಯಕ ಡಾ.ಬಾನಂದೂರು ಕೆಂಪಯ್ಯ ಅವರ ಹುಟ್ಟುಹಬ್ಬವನ್ನು ಎಲೆಮರೆ ಕಾಯಿಯಂತಿರುವ 76ರ ಹರೆಯದ ಕಂಚಿನ ಕಂಠದ ಹಂಡಿಜೋಗಿ ಸಮುದಾಯದ ಹಿರಿಯ ಜಾನಪದ ಗಾಯಕ ಕೆಂಗಲ್ ಹನುಮಂತಪ್ಪ ಅವರ ಮನೆ(ಟೆಂಟ್)ಯಂಗಳದಲ್ಲಿ ಸನ್ಮಾನಿಸುವ ಮೂಲಕ ವಿಶಿಷ್ಟವಾಗಿ ಆಚರಿಸುತ್ತಿದ್ದೇವೆ ಎಂದರು.
ಜಾನಪದ ಸಂಘಟಕರಿಗೆ, ಕಲಾವಿದರು, ಗಾಯಕರಿಗೆಲ್ಲಾ ಸ್ಫೂರ್ತಿಯಾಗಿರುವ ಡಾ.ಬಾನಂದೂರು ಅವರು ಶತಾಯುಷಿಗಳಾಗಿದ್ದು ನಮಗೆಲ್ಲಾ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ಅರ್ಜುನ ಜೋಗಿ ಕಲೆ ಪರಂಪರೆಯ ಕೆಂಗಲ್ ಹನುಮಂತಪ್ಪ ಅವರಿಗೆ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ನೀಡಿ ಸರಕಾರಗಳು ಪೆÇ್ರೀತ್ಸಾಹಿಸಬೇಕು
ಆರು ದಶಕಗಳಿಂದ ಜಾನಪದ ಸೇವೆ ಸಲ್ಲಿಸುತ್ರಿರುವ ಹನುಮಂತಪ್ಪ ಅವರು 76ವರ್ಷವಾದರೂ ಮಾಸಾಶನ ದಿಂದ ವಂಚಿತರಾಗಿದ್ದಾರೆ. ಇವರಿಗೆ ಸರಕಾರದ ಸೌಲಭ್ಯಗಳು ದೊರೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕೇಕ್ ಕಟ್ ಮಾಡಿ ಹನುಮಂತಪ್ಪ ದಂಪತಿಗಳನ್ನು ಮೂರು ಸನ್ಮಾನಿಸಿ ಗೌರವಿಸಲಾಯಿತು. ಬುಡ್ಗಜಂಗಮ, ಸುಡುಗಾಡು ಸಿದ್ಧ ಹಾಗೂ ಹಂಡಿಜೋಗಿ ಸಮುದಾಯದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್