ಗದಗ, 02 ಜೂನ್ (ಹಿ.ಸ.) :
ಆ್ಯಂಕರ್ : ಶಿಕ್ಷಕರು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಿ ಸದೃಡ ದೇಶವನ್ನು ನಿರ್ಮಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.
ಗದಗ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಗದಗ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಅಧ್ಯಕ್ಷರುಗಳಿಗೆ ಶಾಲಾ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ಕುರಿತು ಕಾರ್ಯಗಾರದಲ್ಲಿ ಭಾಗವಹಿ ಅವರು ಮಾತನಾಡಿದರು.
ಶಿಕ್ಷಕರು ಮೌಲ್ಯಗಳನ್ನು ಮೌಲ್ಯಯುತ ಶಿಕ್ಷಣ,ಆದರ್ಶ,ನಿಯತ್ತು ಕಲಿಸುವುದು ಭಾಷಣದ ಮೂಲಕ ಹೇಳುವುದು ತುಂಬಾ ಸುಲಭ ಮಕ್ಕಳಿಗೆ 13-14 ವಯಸ್ಸು ತುಂಬಿದಾಗ ಶಿಕ್ಷಕರು ಹೇಳುವುದು ಸರಿನಾ ತಪ್ಪಾ ಹಾಗು ಕಠಿಣವಾದ ಕೆಲಸವನ್ನು ನಮ್ಮ ಹಿರಿಯರು ಯಾವ ರೀತಿ ಮಾಡುತ್ತಾರೆ ಎಂದು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಾವು ಮಾಡುವ ಕಾರ್ಯಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ ಹಾಗಾಗಿ ನಾವು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಆದರ್ಶ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಆದರ್ಶ ಪ್ರಾಮಾಣಿಕತೆ ನಂಬಿಕೆ ಎನ್ನುವ ಮೌಲ್ಯಗಳ ಕುರಿತು ಮಾತನಾಡಲು ಹೆದರಿಕೆ ಬರುವ ಸಮಯದಲ್ಲಿ ಗದಗ ತಾಲೂಕಿನ ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ಬದಲಾಯಿಸಲು ವಿಶೇಷ ಪ್ರಯತ್ನ ಮಾಡುತ್ತಿರುವುದು ತುಂಬಾ ಸಂತೋಷ ಸಂಗತಿ ಹಾಗು ಶಿಕ್ಷಕರು ಯಾವ ಸೇನಾನಿಗಳಿಗಿಂತ ಸಣ್ಣವರಲ್ಲ,ಶಿಕ್ಷಕರು ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಸಲು ದೈರ್ಯದಿಂದ ಮುನ್ನುಗಬೇಕು ಎಂದರು.
ಅಬ್ರಾಹಂ ಲಿಂಕನ್ ಅವರು ಶಿಕ್ಷಕರಿಗೆ ಪತ್ರ ಬರೆದು ನನ್ನ ಮಗನಿಗೆ ಸುಲಭವಾಗಿ ಉತ್ತಿರ್ಣವಾಗಲು ಕಲಿಸಬೇಡಿ ಅವನಿಗೆ ಸೋಲನ್ನು ಹೇಗೆ ಎದುರಿಸಬೇಕು ಉತ್ತಮ ನೀತಿ ಪಾಠ ನೀಡಿ ಎಂದು ಮುಕ್ತವಾಗಿ ಹೇಳುವಂತಹ ಪಾಲಕರು ಈಗ ನಮ್ಮಲ್ಲಿ ಕಡಿಮೆ ಯಾಗಿದ್ದಾರೆ ಕಾಲ ಬದಲಾಗಿದೆ ಇಂದು ಬೆಳಿಗ್ಗೆ ಶಾಲೆಯಿಂದ ಹೋರಗುಳಿದ ಮಕ್ಕಳನ್ನು ಸ್ವತಃ ಸಚಿವರ ಕಾರಿನಲ್ಲಿ ಕುರಿಸುಕೊಂಡು ಶಾಲೆಗೆ ಕರೆದುಕೊಂಡು ಹೋಗಿ ದಾಖಲಿಸಿ ದಿನಾಲು ಶಾಲೆಗೆ ಬರುತ್ತೆನೆ ಎಂದು ಪ್ರತಿಜ್ಞೆ ಮಾಡಲಾಗಿದೆ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಬಿಸಿಯೂಟ ಸಮವಸ್ತ್ರ ಶೂ ಹಾಲು ಹೀಗೆ ನಾನಾ ಯೋಜನೆಗಳನ್ನು ತಂದು ಅನೇಕ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲಾಗಿದೆ ಇನ್ನು ಬಾಕಿ ಉಳಿದ ವಿದ್ಯಾರ್ಥಿಗಳನ್ನು ಶಾಲೆಗೆ ಪುನಃ ಕರೆತಂದು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂದು ನುಡಿದರು.
ಸ್ವಾಮಿ ನಿರ್ಭಯನಂದ ಸ್ವಾಮಿ ಮಾತನಾಡಿ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಮೊದಲು ಬದಲಾಯಿಸಬೇಕು ಮಗು ಮಾತೃ ಭಾಷೆಯಲ್ಲಿಯೇ ತಮ್ಮ ಪ್ರಾಥಮಿಕ ಶಾಲೆಯನ್ನು ಕಲಿಯಬೇಕು,ಸ್ವಾಮಿ ವಿವೇಕಾಂದರ ಕಲ್ಪನೆಯ ಭಾರತ,ನಿರ್ಮಾಣ ಮಾಡಲು ನಮ್ಮೆಲ್ಲರ ಮಾರ್ಗದರ್ಶನ ಸದಾ ಇರುತ್ತದೆ ಎಂದು ಸುದಿರ್ಘವಾಗಿ ಪೂರ್ವಗ್ರಹ ವಿಲ್ಲದೆ ವಿಷಯಗಳನ್ನು ಪ್ರಸ್ತುತ ಪಡಿಸಿದರು.
ಜೆ ಕೆ ಜಮಾದರ ಅವರು ಮಾತನಾಡಿ ಶಿಕ್ಷಣದ ಮೂಲ ಉದ್ದೇಶ ಒಬ್ಬ ಕಾಡು ಮನುಷ್ಯನನ್ನು ನಾಡು ಮನುಷ್ಯನನ್ನಾಗಿ ಬುದ್ಧಿವಂತರಾಗಿ ಹೃದಯವಂತರಾಗಿ ಸಮಾಜಪ್ರೀಯ ವ್ಯಕ್ತಿ ಯನ್ನಾಗಿ ನಿರ್ಮಿಸುವುದು ಕೆ ಎಚ್ ಪಾಟೀಲ ಪ್ರತಿಷ್ಠಾನ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಮೌಲ್ಯಗಳ ಕುರಿತು ಸರಿಯಾಗಿ ಮನನವಾಗುವ ಹಾಗೇ ಶಿಕ್ಷಣ ನೀಡಬೇಕು,ಮಕ್ಕಳಲ್ಲಿ ರಾಷ್ರಭಕ್ತಿ ಸಮಾನತೆ ಸೇವಾಭಾವ ಸ್ವಾವಲಂಬನೆ ಗಳಂತಹ ಮೌಲ್ಯಗಳು ಇರುವ ಹಾಗೇ ಬೋದಿಸಿ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಆರೋಗ್ಯಕರವಾಗಿ ಸದೃಡ ವ್ಯಕ್ತಿ ಯನ್ನಾಗಿಸಬೇಕು ಹಾಗೇ ಜವಾಹರಲಾಲ್ ನೆಹರೂ ಹೇಳಿದಂತೆ ದೇಶದ ಭವಿಷ್ಯವನ್ನು ತಿಳಿಯಲು ಆಕಾಶದಲ್ಲಿರುವ ನಕ್ಷತ್ರ ನೋಡಿದರೆ ದೇಶದ ಭವಿಷ್ಯ ಗೋಚರಿಸುವುದಿಲ್ಲ ದೇಶದ ಮಕ್ಕಳ ಕಣ್ಣಿನಲ್ಲಿ ಆಶಾವಾದ ,ಧೈರ್ಯ ತುಂಬಿರಬೇಕು ಅಂದಾಗ ಮಾತ್ರ ಆ ದೇಶಕ್ಕೆ ಭವಿಷ್ಯ ಉತ್ತಮವಾಗಿದೆ ಎಂದು ಹೇಳಿರುವುದನ್ನು ನೆನಪುಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಸ್ವಾಮಿಜಿ ಶಿವಾಪ್ರೀಯಾನಂದ ಮಹಾಸ್ವಾಮಿಜಿ,ಡಿ ಆರ್ ಪಾಟೀಲ,ಬಿ ಬಿ ಅಸೂಟಿ,ಅಕ್ಬರ್ಸಾಬ ಬಬರ್ಚಿ ,ಬೇಲೂರು ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್, ಜಿ.ಪಂ ಸಿಇಒ ಭರತ್ ಎಸ್ ,ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಜೇಂದ್ರ,ಡಿಡಿಪಿಐ ಆರ್ ಎಸ್ ಬುರಡಿ ಶಾಲಾ ಮುಖ್ಯ ಶಿಕ್ಷಕರು,ಎಸ್ ಡಿ ಎಂಸಿ ಅಧ್ಯಕ್ಷರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP