ಸೂಲೂರು ಗ್ರಾಮ ಪಂಚಾಯಿತಿ ನೂತನ ಗ್ರಾಮಸೌಧ ನಿರ್ಮಾಣಕ್ಕೆ ಶಿಲಾನ್ಯಾಸ
ಸೂಲೂರು ಗ್ರಾಮ ಪಂಚಾಯಿತಿ ನೂತನ ಗ್ರಾಮಸೌಧ ನಿರ್ಮಾಣಕ್ಕೆ ಶಿಲಾನ್ಯಾಸ
ಶಾಸಕ ಕೊತ್ತೂರು ಮಂಜುನಾಥ್ ಕೋಲಾರ ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯಿತಿ ಕಟ್ಟಡದ ಮೊದಲ ಅಂತಸ್ತಿನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.


ಕೋಲಾರ, ೦೨ ಜೂನ್ (ಹಿ.ಸ) :

ಆ್ಯಂಕರ್ : ತಾಲ್ಲೂಕಿನ ಚಲ್ಲಹಳ್ಳಿ-ಸೂಲೂರುವರೆಗೂ ರಸ್ತೆ ಹಾಗೂ ರಾಷ್ಟಿçಯ ಹೆದ್ದಾರಿ ಕೆಂದಟ್ಟಿಯಿ0ದ ಸೂಲೂರು, ಅಂದ್ರಹಳ್ಳಿ ಮಾರ್ಗವಗಿ ಮೇಡಿಹಾಳ ಗೇಟ್‌ವರೆಗೂ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಗಿದ್ದು, ಕೋಲಾರ ವಿಧಾನ ಸಭಾ ಕ್ಷೇತ್ರದ ಶೇ ೯೯ ರಷ್ಟು ರಸ್ತೆಗಳ ಅಭಿವೃದ್ದಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ಕೋಲಾರ ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯಿತಿ ಕಟ್ಟಡದ ಮೊದಲ ಅಂತಸ್ತಿನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ, ೧೦೦ ಮಂದಿ ವಿಕಲಚೇತನರಿಗೆ ತಲಾ ೫ ಸಾವಿರ ರೂ ಸಹಾಯಧನ, ಪರಿಶಿಷ್ಟ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನವಾಗಿ ತಲಾ ೫ ಸಾವಿರಗಳ ಚೆಕ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮ ಪಂಚಾಯಿತಿಗಳು ಪ್ರತಿಯೊಬ್ಬರ ಸ್ವತ್ತಾಗಿದ್ದು, ಅಭಿವೃದ್ದಿ ಎಲ್ಲರ ಜವಾಬ್ದಾರಿಯಾಗಿದೆ, ೪೦ ಲಕ್ಷ ರೂ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಮೊದಲ ಮಹಡಿ ನಿರ್ಮಾಣದ ಕಾಮಗಾರಿಗೆ ೨೦ ಲಕ್ಷ ರೂ ನರೇಗಾದ ಹಣ, ಉಳಿದ ೨೦ ಲಕ್ಷ ರೂಗಳನ್ನು ನನ್ನ ಅನುದಾನದಲ್ಲಿ ೧೦ ಲಕ್ಷ, ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅನಮದ್ ಅನುದಾನದಲ್ಲಿ ತಲಾ ಐದೈದು ಲಕ್ಷ ಒದಗಿಸುವ ಭರವಸೆ ನೀಡಿ,ಉಳಿದಂತೆ ಪೀಠೋಪಕರಣಗಳಿಗೆ ನಾನು ಬೇರೆ ವ್ಯವಸ್ಥೆ ಮಾಡಿ ಕೊಡುವ ಭರವಸೆ ನೀಡಿದರು.

ದೇವನಹಳ್ಳಿಯಿಂದ ಇಂಡ್ರಾಸ್ಟಿಯಲ್ ಕಾರಿಡಾರ್ ರೋಡ್ ,ಚೆನ್ನೆöÊ ಬೆಂಗಳೂರು ಎಕ್ಸಪ್ರೆಸ್ ರೋಡ್ ಸೇರಿದಂತೆ ಒಟ್ಟು ೩೪೦೦ ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗಳಾಗುತ್ತಿದೆ ಎಂದ ಅವರು ಗ್ಯಾರೆಂಟಿ ಯೋಜನೆಗಳಿಂದ ಸರ್ಕಾರಕ್ಕೆ ಲಾಭವೂ ಅಗುತ್ತಿದೆ.

ಅಭಿವೃದ್ದಿಗೆ ಹಣದ ಕೊರತೆ ಇಲ್ಲ. ಇನ್ನು ೩ ವರ್ಷದಲ್ಲಿ ಕೋಲಾರ ವಿಧಾನ ಸಭಾ ಕ್ಷೇತ್ರದ ಶೇ ೯೯ ರಷ್ಟು ರಸ್ತೆಗಳ ಅಭಿವೃದ್ದಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ, ಆಸ್ಪತ್ರೆ, ಶಾಲಾ ಕಾಲೇಜುಗಳಿಗೆ ಸಮರ್ಪಕವಾದ ರಸ್ತೆಗಳು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ನರಸಾಪುರ ಕೈಗಾರಿಕಾ ವಲಯದಲ್ಲಿ ಪೊಲೀಸ್ ಸ್ಟೇಷನ್ ನಿರ್ಮಾಣಕ್ಕೆ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದು, ಶಾಸಕರ ಮನವಿಗೆ ಸ್ಪಂದನೆ ನೀಡಿದ್ದಾರೆ ಎಂದರು.

ಯೋಜನಾ ಪ್ರಾಧಿಕಾರದಿಂದ ಹೊಸದಾಗಿ ವೇಮಗಲ್, ನರಸಾಪುರಕ್ಕೆ ಒಳಪಟ್ಟಿದ್ದು, ಸೂಲೂರು ಹಾಗೂ ಅರಾಭಿಕೊತ್ತನೂರು ವ್ಯಾಪ್ತಿಯ ಗ್ರಾಮಗಳ ಕೈಗಾರಿಕೆಗಳಿಂದ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ಕೊತ್ತೂರು ಮಂಜುನಾಥ್ ಇವರಿಂದ ಯೋಜನಾ ಪ್ರಾಧಿಕಾರವಾಗಿದೆ ಎಂದರು.

ಗ್ರಾರAಟಿಗಳ ಬಗ್ಗೆ ಅಪಪ್ರಚಾರ ಯಾವುದೆ ಅಭಿವೃದ್ಧಿ ಆಗುತ್ತಿಲ್ಲ ಎಂಬುವವರು ಈಗ ರಸ್ತೆ, ಕೆರೆಗಳ ಅಭಿವೃದ್ಧಿ, ಗ್ರಾಮ ಪಂಚಾಯಿಗಳ ಅಭಿವೃದ್ಧಿಗೆ ಹಣವಿಲ್ಲ ಎನ್ನುತ್ತಿದ್ದವರುಇವುಗಳಿಗೆಲ್ಲ ಹೇಗೆ ಎಂನ್ನುತ್ತಿದ್ದವರು ಯೋಚಿಸಲಿ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದ ಸರ್ಕಾರ ಅಸ್ಥಿತ್ವಕ್ಕೆ ಬಂದು ೨ ವರ್ಷ ಪೂರ್ಣಗೊಳಿಸಿದೆ. ಗ್ಯಾರೆಂಟಿ ಯೋಜನೆಗಳಿಗೆ ಪ್ರತಿ ವರ್ಷ ೫೭ ಸಾವಿರ ರೂ ಕೋಟಿ ವಿನಿಯೋಗಿಸುತ್ತಿದೆ. ಇದರ ಜೂತೆಗೆ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ನಿರಂತರವಾಗಿ ಹಮ್ಮಿಕೊಂಡು ರಾಜ್ಯದಲ್ಲಿ ಐತಿಹಾಸಿಕ ದಾಖಲೆಯಾಗಿದೆ ಎಂದರು.

ಚುAಚದೇನಹಳ್ಳಿ ಮೂಲಕ ಮಾಲೂರು ರಸ್ತೆ ಸಂರ್ಪಕ, ನಾಗಲಾಪುರ ರಸ್ತೆ ಚದುಮನಹಳ್ಳಿ ಮೂಲಕ ೯ ಕಿ.ಮಿ. ರಿಂಗ್ ರಸ್ತೆ ಸೇರಿದಂತೆ ಮುಂದಿನ ದಿನಗಳಲ್ಲಿ ಉಳಿದ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕೆಲವು ಹೋಬಳಿ ಕೇಂದ್ರಗಳು ತಾಲ್ಲೂಕುಗಳಾಗಲಿದೆ. ಜನಗಣತಿ ನಂತರ ಕ್ಷೇತ್ರ ವಿಂಗಡನೆ ಆಗುವ ಸಾಧ್ಯತೆ ಇದೆ. ೧೨.೫ ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ಹಾಗೂ ೪ ಕೋಟಿ ರೂ ವೆಚ್ಚದಲ್ಲಿ ಕುರ್ಕಿ ಕೆರೆಯನ್ನು ಅಭಿವೃದ್ದಿ ಪಡೆಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಪ್ರಾಸ್ತವಿಕವಾಗಿ ಮಾತನಾಡಿ, ಸೂಲೂರು ಗ್ರಾಮಕ್ಕೆ ೧,೫ ಕೋಟಿ ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣ, ವಿವಿಧ ಗ್ರಾಮಗಳಿಗೆ ಹೈಮಾಸ್ಕ್ ದೀಪಗಳು, ಸಿ.ಸಿ. ರಸ್ತೆಗಳು ಮಂಜೂರು ಮಾಡಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದ ಅವರು ಕೆಂದಟ್ಟಿಯಿAದ ಅಂಧ್ರಹಳ್ಳಿ ಮಾರ್ಗದ ರಸ್ತೆ, ಮೇಡಿಹಾಳದವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿಗಳು, ತಲಗುಂದದಿAದ ಚುಂಚದೇನಹಳ್ಳಿ ಮಾರ್ಗದ ರಸ್ತೆಗಳ ನಿರ್ಮಾಣಕ್ಕೆ ಮನವಿ ಮಾಡಿದರು,

ಕಳೆದ ವರ್ಷ ಸೂಲೂರು ಗ್ರಾಮ ಪಂಚಾಯಿತಿ ಗಾಂಧಿಗ್ರಾಮ ಪುರಸ್ಕರಕ್ಕೆ ಎಂಎಲ್‌ಸಿ ಅನಿಲ್ ಕುಮಾರ್ ಶಿಫಾರಸ್ ಮಾಡಿದ್ದನ್ನು ಸ್ಮರಿಸಿದ ಅವರು ಕೋಲಾರ ವಿಧಾನ ಕ್ಷೇತ್ರಕ್ಕೆ ಯಾವೂದೇ ಅನುದಾನಗಳು ಬಂದರೂ ನಮ್ಮ ಪಂಚಾಯಿತಿಗೆ ಪ್ರಥಮ ಆಧ್ಯತೆ ನೀಡುತ್ತಿರುವುದಕ್ಕೆ ಗ್ರಾಮದ ಪರವಾಗಿ ಅಭಿನಂದನೆ ಸಲ್ಲಿಸಿದರು,

ಇದೇ ಸಂದರ್ಭಧಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ೧೦೦ ಮಂದಿ ಅಂಗವಿಕಲರಿಗೆ ತಲಾ ೫ ಸಾವಿರ ರೂ ಹಾಗೂ ೪೦ ಮಂದಿ ಎಸ್.ಸಿ. ಮತ್ತು ಎಸ್.ಟಿ. ವಿದ್ಯಾರ್ಥಿಗಳಿಗೆ ತಲಾ ೫ ಸಾವಿರ ರೂನಂತೆ ಚೆಕ್‌ಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಚೆಂಜಿಮಲೆ ರಮೇಶ್, ಮೈಲಾಂಡಹಳ್ಳಿ ಮುರಳಿ, ಗ್ಯಾರೆಂಟಿ ಯೋಜನೆ ಅಧ್ಯಕ್ಷ ವೈ.ಶಿವಕುಮಾರ್, ತಾಪಂ ಇಒ ಮಂಜುನಾಥ್, ಸದಸ್ಯರಾದ ಚಂದ್ರಿಕಾ, ಲೋಕೇಶ್, ಎಂ.ನಾರಾಯಣಸ್ವಾಮಿ, ಎನ್.ಕೃಷ್ಣಮೂರ್ತಿ,ಅಶೋಕ್, ಗಾಯತ್ರಮ್ಮ, ಎಂ.ನಾರಾಯಣಸ್ವಾಮಿ,ಎಸ್.ನAದಿನಿ, ಶಿಲ್ಪ, ಸಿ.ಎನ್.ಮುನಿರಾಜು, ಪದ್ಮ, ಆದಿಮೂರ್ತಿ, ನರಸರಾಜು,ರಾಮಕ್ಕ, ರಬೀನಾತಾಜ್,ಸುಜಾತಮ್ಮ, ವೆಂಕಟೇಶಪ್ಪ, ಸಿದ್ದಮ್ಮ ಶ್ಯಾಮಲ,ಮುಖಂಡ ಉರುಟಿ ಅಗ್ರಹಾರ ರೆಡ್ಡಿ, ಕುಮಾರ್, ವೀರೇಂದ್ರಪಾಟೀಲ್ ಮತ್ತಿತರರಿದ್ದರು.

ಚಿತ್ರ ; ಶಾಸಕ ಕೊತ್ತೂರು ಮಂಜುನಾಥ್ ಕೋಲಾರ ತಾಲ್ಲೂಕಿನ ಸೂಲೂರು ಗ್ರಾಮ ಪಂಚಾಯಿತಿ ಕಟ್ಟಡದ ಮೊದಲ ಅಂತಸ್ತಿನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande