ಜಿಲ್ಲಾ ಉಗ್ರಾಣದ ಹಿರಿಯ ಫಾರ್ಮಸಿ ಅಧಿಕಾರಿ ಶ್ರೀನಿವಾಸ್ ಜನಾದ್ರಿ ನಿವೃತ್ತಿ
ಕೊಪ್ಪಳ, 01 ಜೂನ್ (ಹಿ.ಸ.) : ಆ್ಯಂಕರ್ : ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ ಶ್ರೀನಿವಾಸ್ ಜನಾದ್ರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಜಿಲ್ಲಾ ಉಗ್ರಾಣದ ಹಿರಿಯ ಫಾರ್ಮಸಿ ಅಧಿಕಾರಿಯಾಗಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಅಧಿಕಾರ, ಹಣ ಈ ಎರಡರಲ್ಲೇ ಯಶಸ್ಸು ಸೀಮಿತ
ಜಿಲ್ಲಾ ಉಗ್ರಾಣದ ಹಿರಿಯ ಫಾರ್ಮಸಿ ಅಧಿಕಾರಿ ಶ್ರೀನಿವಾಸ್ ಜನಾದ್ರಿ ನಿವೃತ್ತಿ


ಕೊಪ್ಪಳ, 01 ಜೂನ್ (ಹಿ.ಸ.) :

ಆ್ಯಂಕರ್ : ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ ಶ್ರೀನಿವಾಸ್ ಜನಾದ್ರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಜಿಲ್ಲಾ ಉಗ್ರಾಣದ ಹಿರಿಯ ಫಾರ್ಮಸಿ ಅಧಿಕಾರಿಯಾಗಿ ಸೇವೆಯಿಂದ ನಿವೃತ್ತರಾಗಿದ್ದಾರೆ.

ಅಧಿಕಾರ, ಹಣ ಈ ಎರಡರಲ್ಲೇ ಯಶಸ್ಸು ಸೀಮಿತವಲ್ಲ ಎಂಬ ನಿಜವಾದ ಅರ್ಥವನ್ನು ತಮ್ಮ ಸಮಾಜಮುಖಿ ಬದುಕಿನಿಂದ ಅವರು ಸ್ಪಷ್ಟಪಡಿಸಿದ್ದಾರೆ.

1990 ರಲ್ಲಿ ಪಾರ್ಮಸಿ ಹುದ್ದೆಗೆ ನೇಮಗೊಂಡ ಇವರು ಇಲಾಖೆಯ ವಿವಿಧ ಸಂಘ ಸಂಸ್ಥೆಗಳಲ್ಲಿ ಸಂಸ್ಥಾಪಕರಲ್ಲಿ ಒಬ್ಬರಾಗಿ ಹಾಗೂ ಆರೋಗ್ಯ ಇಲಾಖೆಯ ಗೃಹ ನಿರ್ಮಾಣ ಸಂಘದ ಅಧ್ಯಕ್ಷರಾಗಿ ಹಾಗೂ ಸಂಘ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತರಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಶ್ರದ್ದೆಯಿಂದ' ಭಾಗವಹಿಸುತ್ತಾ, ಶ್ರೀನಿವಾಸ್ ಜನಾದ್ರಿ ಹಲವಾರು ಸೇವೆಗಳ ಮೂಲಕ ಸಮಾಜಕ್ಕೆ ದಾರಿದೀಪವಾಗಿದ್ದಾರೆ.

ವಿಶೇಷ ವಿದ್ಯಾಭ್ಯಾ ಸಕ್ಕಾಗಿ ತಮ್ಮದೇ ಆದ ವೆಚ್ಚದಲ್ಲಿ ನೆರವಾಗುತ್ತಿರುವುದು ಅವರಿಗೆ ಮಾನವೀಯ ಮುಖವನ್ನೂ ನೋಡಬಹುದಾಗಿದೆ. , ಬಡ ವಿದ್ಯಾರ್ಥಿಗಳ ಅಪಾರ ಸೇವೆಯೊಂದರ ಭಾಗವಾಗಿ ಅವರು ಅನೇಕ ಶಿಬಿರಗಳನ್ನು ತಾವು ಖರ್ಚು ಹೊತ್ತು ನಡೆಸಿದ್ದಾರೆ. ಸಾಮಾನ್ಯ ಜನರಲ್ಲಿ ಹೆಚ್ಚು ಬೆರೆತು ನಗುನಗುತ ತಮ್ಮ ಮಿತವ್ಯಯಿ ನಡತೆ ಹಾಗೂ ಸದು ಪದೇಶಗಳಿಂದ ಜನರ ಬಾಳಿನಲ್ಲಿ ದಾರಿ ದೀಪ ಎನಿಸಿಕೊಂಡಿದ್ದಾರೆ.

ಗುಂಡಪ್ಪ ಜನಾದ್ರಿ ಹಾಗೂ ಲಕ್ಷ್ಮಿದೇವಿ ದಂಪತಿ ಪುತ್ರರಾದ ಶ್ರೀನಿವಾಸ್ ಅವರು, ಶೀನಣ್ಣ ಎಂದೇ ಕೊಪ್ಪಳಕ್ಕೆ ಚಿರಪರಿಚಿತ ಹೆಸರಾಗಿದ್ದು, ಅವರು ತೋರಿದ ಸಮಾಜಮುಖಿ ದಾರಿಗೆ ಇನ್ನೂ ಹಲವರು ಪ್ರೇರಿತರಾಗಲಿ ಎಂಬದು ಅವರ ಇಚ್ಛೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande