ಶಿಗ್ಲಿ ಗ್ರಾಮದಲ್ಲಿ ಸಂಜೀವಿನಿ ಮಾಸಿಕ ಸಂತೆಗೆ ಚಾಲನೆ
ಗದಗ, 31 ಮೇ (ಹಿ.ಸ.) : ಆ್ಯಂಕರ್ : ಗ್ರಾಮೀಣ ಪ್ರದೇಶಗಳ ಸಂಜೀವಿನಿ ಮಹಿಳಾ ಗುಂಪಿನ ‌ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಉತ್ತೇಜನ, ಕಲ್ಪಿಸುವ ಉದ್ದೇಶದಿಂದ ಈ ಮಾಸಿಕ ಸಂತೆಗೆ ಚಾಲನೆ ನೀಡಲಾಗಿದೆ ಎಂದು ತಾಲೂಕ‌ ಪಂಚಾಯತ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅವರು ಹೇಳಿದರು.
ಪೋಟೋ


ಗದಗ, 31 ಮೇ (ಹಿ.ಸ.) :

ಆ್ಯಂಕರ್ : ಗ್ರಾಮೀಣ ಪ್ರದೇಶಗಳ ಸಂಜೀವಿನಿ ಮಹಿಳಾ ಗುಂಪಿನ ‌ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಉತ್ತೇಜನ, ಕಲ್ಪಿಸುವ ಉದ್ದೇಶದಿಂದ ಈ ಮಾಸಿಕ ಸಂತೆಗೆ ಚಾಲನೆ ನೀಡಲಾಗಿದೆ ಎಂದು ತಾಲೂಕ‌ ಪಂಚಾಯತ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅವರು ಹೇಳಿದರು.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮ‌ ಪಂಚಾಯತ ಆವರಣದಲ್ಲಿ ಗ್ರಾಮ ಪಂಚಾಯತ ಮತ್ತು ಗ್ರಾಮ ಪಂಚಾಯತ ಮಟ್ಟದ ಸಂಜೀವಿನಿ ಒಕ್ಕೂಟದ ಸಹಯೋಗದಲ್ಲಿ ತಾಲ್ಲೂಕ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮಕ್ಕೆ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಮಾಸಿಕ ಸಂತೆಯ ಆಯೋಜನೆ ಮೂಲಕ ಮಹಿಳಾ ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಹಾಗೂ ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ಉತ್ಪನ್ನಗಳನ್ನು ಪರಿಚಯಿಸುವುದು, ಹೆಚ್ಚು ಹೆಚ್ಚು ಮಹಿಳೆಯರು ಸ್ವಾವಲಂಬಿಗಳಾಗಲು ಉಪಯುಕ್ತವಾಗಿದೆ ಎಂದು ತಿಳಿಸಿದರು. ಮಹಿಳೆಯರು ಮಾಸಿಕ ಸಂತೆಯಲ್ಲಿ ತಮ್ಮ ಉತ್ಪನಗಳ ಮಾರಾಟ ಮಾಡಲು ಮುಂದೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ ಗ್ರಾಮ ಪಂಚಾಯತಿ ಸದಸ್ಯರಾದ ಯಲ್ಲಪ್ಪ ತಳವಾರ ಮಾತನಾಡಿ, ಮಹಿಳಾ ಸ್ವಸಹಾಯ ಗುಂಪುಗಳ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಮೂಲಕ ಆರ್ಥಿಕವಾಗಿ ಸಶಕ್ತರಾಗಲು ಸಹಾಯಕಾರಿ ಆಗಿದೆ ಎಂದರು.

ಮಾರಟಕ್ಕಿರುವ ದಿನಬಳಕೆ ವಸ್ತುಗಳು...

ಹಪ್ಪಳ, ಕೊಡಬಳಿ, ಚಕ್ಕಲಿ ಉಪ್ಪಿನಕಾಯಿ, ಶೇಂಗಾ ಮತ್ತು ಅಗಸಿ ಚಟ್ನಿ, ಖಾರದ ಪುಡಿ,

ಶೇಂಗಾ ಹೊಳಿಗೆ, ಶಂಕರ ಪಾಳೆ, ಚಿಪ್ಸ್, ಸೋಯಾಬಿನ್, ಶಿಗ್ಲಿ ಸೀರೆ, ಚಿಕ್ಕ ಮಕ್ಕಳ ಉಡುಪುಗಳು, ಗೃಹೋಪಯೋಗಿ ಅಲಂಕಾರಿಕ ವಸ್ತುಗಳು, ರಂಗೋಳಿ ಅಚ್ಚುಗಳು, ಮಣ್ಣಿನ ತಯಾರಿಸಿದ ಆಹಾರ ತಯಾರಿಕ ವಸ್ತುಗಳು ಸೇರಿ ಇತರ ಉತ್ಪನ್ನಗಳು ಮಾರಟಕ್ಕೆ ಇಡಲಾಗಿದೆ.

ಗ್ರಾಮ ಪಂಚಾಯತ ಅಧ್ಯಕ್ಷೆ ಸಂಗೀತಾ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ ಸದಸ್ಯರ ಬಸಪ್ಪ ಕರ್ಜಗಿ, ಆಕಳಂಡಪ್ಪ ಕರ್ಜಕಣ್ಣವರ, ಶೈಲಾ ಹೂಗಾರ, ರೇಣುಕಾ ಆತಡಕರ, ಸಂತೋಷ ತಾಂದಳ, ಲಲಿತಾ ತವರಿ, ಜಯಶ್ರೀ ಕರ್ಜಗಿ, ಶಿವಪ್ಪ ಕುರಿ, ಗ್ರಾಮದ ಪ್ರಮುಖರಾದ ಮಂಜುನಾಥ ಮಹೇಂದ್ರಕರ, ಕುಮಾರಸ್ವಾಮಿ ವಿಕ್ತಕಮಠ, ಗ್ರಾಪಂ ಅಭಿವೃದ್ಧಿ ಅಧಿಕಾರಿ ರವಿ‌ ಕೊರಕನವರ, ಸಂಜೀವಿನಿ ಯೋಜನೆ ಒಕ್ಕೂಟದ ಅಧ್ಯಕ್ಷೆ ನೇತ್ರಾವತಿ ಮಹೀಂದ್ರಕರ, ವಲಯ ಮೇಲ್ವಿಚಾರಕರಾದ ಬಸವರಾಜ ಗುತ್ತೆದ್ದಾರ, ಪಿ.ಎಂ ಪಾಟೀಲ ಮತ್ತು ಸಂಜೀವಿನಿ ಯೋಜನೆ ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿ ಮತ್ತು ಸ್ವ-ಸಹಾಯ ಗುಂಪಿನ ಸದಸ್ಯರು ಉಪಸ್ಥಿತರಿದ್ದರು.

ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ಮಾರುತಿ ಕೊಡ್ಲಿ ಸ್ವಾಗತಿಸಿದರು. ತಾಲೂಕು ವ್ಯವಸ್ಥಾಪಕ ವಿರೂಪಾಕ್ಷ ಕೊನ್ನಣವರ‌ ನಿರೂಪಿಸಿ ಮತ್ತು ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande