ರಾಯಚೂರು : ಕೊಲೆಯೊಂದಿಗೆ ಅಂತ್ಯವಾದ ಜಗಳ
ರಾಯಚೂರು, 26 ಮೇ (ಹಿ.ಸ.) : ಆ್ಯಂಕರ್ : ಕ್ಷುಲ್ಲಕ ಕಾರಣಕ್ಕೆ ಗೆಳೆಯರ ಮಧ್ಯೆ ನಡೆದ ಜಗಳದಲ್ಲಿ ಚಾಕು ಇರಿದು ಯುವಕ ನೂರ್ವನ ಕೊಲೆ ಮಾಡಿದ ಘಟನೆ ರಾಯಚೂರಿನ ಮಾಣಿಕ್ ನಗರದಲ್ಲಿ ಭಾನುವಾರ ನಡೆದಿದೆ. ಕೊಲೆಯಾದ ಯುವಕನನ್ನು ಶೇಕ್ ಮಹ್ಮದ ಆರೀಫ್ ಎಂದು ಗುರುತಿಸಲಾಗಿದೆ. ಎಂ.ಡಿ.ಮುಜಾಯಿತ್ ಹಾಗೂ ಗೌಸ್‌
ರಾಯಚೂರು: ಕೊಲೆಯೊಂದಿಗೆ ಅಂತ್ಯವಾದ ಜಗಳ


ರಾಯಚೂರು, 26 ಮೇ (ಹಿ.ಸ.) :

ಆ್ಯಂಕರ್ : ಕ್ಷುಲ್ಲಕ ಕಾರಣಕ್ಕೆ ಗೆಳೆಯರ ಮಧ್ಯೆ ನಡೆದ ಜಗಳದಲ್ಲಿ ಚಾಕು ಇರಿದು ಯುವಕ ನೂರ್ವನ ಕೊಲೆ ಮಾಡಿದ ಘಟನೆ ರಾಯಚೂರಿನ ಮಾಣಿಕ್ ನಗರದಲ್ಲಿ ಭಾನುವಾರ ನಡೆದಿದೆ.

ಕೊಲೆಯಾದ ಯುವಕನನ್ನು ಶೇಕ್ ಮಹ್ಮದ ಆರೀಫ್ ಎಂದು ಗುರುತಿಸಲಾಗಿದೆ.

ಎಂ.ಡಿ.ಮುಜಾಯಿತ್ ಹಾಗೂ ಗೌಸ್‌ ಎಂಬ ವಿದ್ಯಾರ್ಥಿಗಳು ಜಗಳವಾಡಿ ಚಾಕುವಿನಿಂದ ಹೊಟ್ಟೆಗೆ ತಿವಿದಿದ್ದರಿಂದ ತೀವ್ರ ರಕ್ತಸ್ರಾವವಾಗಿತ್ತು. ಹಳೆ ದ್ವೇಷ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ನೇತಾಜಿನಗರ ಪಿಐ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಈ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande