ಕೊಳಗಲ್ಲು ಶ್ರೀಮತಿ ರತ್ಮಮ್ಮವ್ವ ಅಂತ್ಯಕ್ರಿಯೆ : ಭಕ್ತಾದಿಗಳು ನಿರಾಳ
ಬಳ್ಳಾರಿ, 27 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಅನಾರೋಗ್ಯದ ಕಾರಣ ನಿಧನರಾಗಿ ಅಂತ್ಯ ಸಂಸ್ಕಾರದ ತೀವ್ರ ವಿವಾದಕ್ಕೆ ಒಳಗಾಗಿದ್ದ ಕೊಳಗಲ್ಲು ಗ್ರಾಮದ ಶ್ರೀ ಎರ್ರಿತಾತನ ಮಠದ ಧರ್ಮಕರ್ತೆ ಎರೆಪ್ಪ ತಾತ ಅವರ ಧರ್ಮಪತ್ನಿ ಶ್ರೀಮತಿ ರತ್ಮಮ್ಮವ್ವ ಅವರ ಅಂತ್ಯ ಸಂಸ್ಕಾರವು ಶನಿವಾರ ಮಧ್ಯಾಹ್ನ ಶ್ರೀ
ಕೊಳಗಲ್ಲು ಶ್ರೀಮತಿ ರತ್ಮಮ್ಮವ್ವಳ ಅಂತ್ಯಕ್ರಿಯೆ :  ಭಕ್ತಾಧಿಗಳು ನಿರಾಳ


ಕೊಳಗಲ್ಲು ಶ್ರೀಮತಿ ರತ್ಮಮ್ಮವ್ವಳ ಅಂತ್ಯಕ್ರಿಯೆ :  ಭಕ್ತಾಧಿಗಳು ನಿರಾಳ


ಕೊಳಗಲ್ಲು ಶ್ರೀಮತಿ ರತ್ಮಮ್ಮವ್ವಳ ಅಂತ್ಯಕ್ರಿಯೆ :  ಭಕ್ತಾಧಿಗಳು ನಿರಾಳ


ಕೊಳಗಲ್ಲು ಶ್ರೀಮತಿ ರತ್ಮಮ್ಮವ್ವಳ ಅಂತ್ಯಕ್ರಿಯೆ :  ಭಕ್ತಾಧಿಗಳು ನಿರಾಳ


ಕೊಳಗಲ್ಲು ಶ್ರೀಮತಿ ರತ್ಮಮ್ಮವ್ವಳ ಅಂತ್ಯಕ್ರಿಯೆ :  ಭಕ್ತಾಧಿಗಳು ನಿರಾಳ


ಬಳ್ಳಾರಿ, 27 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಅನಾರೋಗ್ಯದ ಕಾರಣ ನಿಧನರಾಗಿ ಅಂತ್ಯ ಸಂಸ್ಕಾರದ ತೀವ್ರ ವಿವಾದಕ್ಕೆ ಒಳಗಾಗಿದ್ದ ಕೊಳಗಲ್ಲು ಗ್ರಾಮದ ಶ್ರೀ ಎರ್ರಿತಾತನ ಮಠದ ಧರ್ಮಕರ್ತೆ ಎರೆಪ್ಪ ತಾತ ಅವರ ಧರ್ಮಪತ್ನಿ ಶ್ರೀಮತಿ ರತ್ಮಮ್ಮವ್ವ ಅವರ ಅಂತ್ಯ ಸಂಸ್ಕಾರವು ಶನಿವಾರ ಮಧ್ಯಾಹ್ನ ಶ್ರೀಮಠದ ಎದುರಿನ ಖಾಲಿ ಸ್ಥಳದಲ್ಲಿ ನೆರವೇರಿಸುವ ಮೂಲಕ ವಿವಾದ ಸುಖಾಂತ್ಯ ಕಾಣಿತು.

ಪರಿಶಿಷ್ಟ ಜಾತಿಯ ಶ್ರೀಮತಿ ರತ್ಮಮ್ಮವ್ವ ವಂಶಸ್ಥರು (ತವರು ಮನೆಗೆ) ಸೇರಿದ ಸ್ಥಳದಲ್ಲಿ ಪವಾಡ ಪುರುಷ ಎರ್ರಿತಾತ (ಕುರುಬ ಸಮಾಜದ)ರ ಸಮಾಧಿಯನ್ನು ಅವರು ನಿರ್ಮಿಸಿ, ಮಠವನ್ನು ಕಟ್ಟಿ ಮಠದಲ್ಲಿಯೇ ಮನೆ ಮಾಡಿಕೊಂಡು ರತ್ನಮ್ಮವ್ವ ಮತ್ತು ಎರೆಪ್ಪ ತಾತ ದಂಪತಿ ಪೂಜೆ ನಡೆಸುತ್ತಿದ್ದರು.

ಶ್ರೀ ಎರ್ರೆಪ್ಪ ತಾತ ಅವರು ದೈವಾಧೀನರಾದ ನಂತರ ಅವರ ದೈವಿಕ ಶರೀರವನ್ನು ಶ್ರೀಮಠದ ಆವರಣದಲ್ಲಿಯೇ ಇರಿಸಿ, ಗುಡಿಯನ್ನು ಕಟ್ಟಲಾಗಿದೆ. ನಂತರ, ಗ್ರಾಮದ ಕುರುಬರು ಮತ್ತು ಪರಿಶಿಷ್ಟರ ಮಧ್ಯೆ ಮಠದ ವಾರಸುದಾರಿಕೆ ವಿವಾದ ಸೃಷ್ಟಿಯಾಗಿ ಕಾನೂನಿನ ತೊಡಕುಗಳು ಉಂಟಾದವು. ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಎರ್ರೆಪ್ಪ ತಾತ ಅವರ ಶರೀರ ವಿವಾದದ ಕೇಂದ್ರ ಬಿಂದುವಾಯಿತು.

ವಿವಾದದ ಕಾರಣ ಕೊಳಗಲ್ಲು ಗ್ರಾಮದಲ್ಲಿ ಸದಾಕಾಲ ಪರಿಶಿಷ್ಟರು ಮತ್ತು ಕುರುಬರ ಮಧ್ಯೆ ಕಾನೂನು ಸುವ್ಯವಸ್ಥೆಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಡಿಎಆರ್ ಪೊಲೀಸ್‍ನ ತುಕಡಿ ಹಗಲು - ರಾತ್ರಿ ಬಂದೋಬಸ್ತ್ ಏರ್ಪಡಿಸಿತ್ತು. ಈ ಮಧ್ಯೆ ಎರ್ರೆಪ್ಪ ತಾತ ಅವರ ಧರ್ಮಪತ್ನಿ ಶ್ರೀಮತಿ ರತ್ಮಮ್ಮವ್ವ ಅವರು

ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದರೂ ಫಲ ಸಿಗದ ಕಾರಣ ಡಿಸೆಂಬರ್ 25ರ ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದರು. ಅಂದು ಸಂಜೆ ಆಂಬುಲೆನ್ಸ್‍ನಲ್ಲಿ ದೇಹವನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.

ಶ್ರೀಮತಿ ರತ್ಮಮ್ಮವ್ವ ಅವರ ಅನುಯಾಯಿಗಳು - ಶ್ರೀಮಠದ ಆವರಣದಲ್ಲಿಯೇ ಅವರ ಶರೀರದ ಅಂತ್ಯಕ್ರಿಯೆ ನೆರವೇರಿಸಬೇಕು ಎಂದು ಪಟ್ಟು ಹಿಡಿದಿದ್ದರು.

ಆಗ, ಗ್ರಾಮದಲ್ಲಿ 150 ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಶ್ರೀಮಠ ಮತ್ತು ಕೊಳಗಲ್ಲು ಗ್ರಾಮದಲ್ಲಿ ಬೀಡುಬಿಟ್ಟು ಬಂದೋಬಸ್ತ್ ಏರ್ಪಡಿಸಿದ್ದರು. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಶ್ರೀ ಎರ್ರೆಪ್ಪ ತಾತ ಅವರ ಪಾರ್ಥಿವ ಶರೀರದ ವಿವಾದವು ನ್ಯಾಯಾಲಯದಲ್ಲಿ ಇರುವ ಕಾರಣ, ಶುಕ್ರವಾರ ಮಧ್ಯಾಹ್ನ ಗ್ರಾಮದಲ್ಲಿ ಸಾರ್ವಜನಿಕ ಶಾಂತಿ ಸಭೆ ನಡೆದು, ಶ್ರೀಮತಿ ರತ್ಮಮ್ಮವ್ವ ಅವರ ಅಂತ್ಯಕ್ರಿಯೆಯನ್ನು ಶ್ರೀಮಠದ ಆವರಣದ ಹೊರಗಡೆಯ ಖಾಲಿ ಸ್ಥಳದಲ್ಲಿ ನೆರವೇರಿಸಲು ನಿರ್ಧಾರ ಕೈಗೊಳ್ಳಲಾಯಿತು.

ಕ್ರಿಯಾ ಸಮಾಧಿ ನಿರ್ಮಾಣವಾಗಿತ್ತು. ಶ್ರೀಮತಿ ರತ್ಮಮ್ಮವ್ವ ಶರೀರವನ್ನು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ, ಬಿಗಿ ಬಂದೋಬಸ್ತ ನಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಅಂತ್ಯ ಸಂಸ್ಕಾರದ ವಿಧಿ ಸಂಪ್ರದಾಯಗಳ ನೇತೃತ್ವ ವಹಿಸಿದ್ದರು. ಗ್ರಾಮಸ್ಥರು, ಭಕ್ತಾಧಿಗಳು ಮತ್ತು ಪೊಲೀಸರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande