
ವಿಜಯಪುರ, 20 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ವಿಚಾರದಲ್ಲಿ ನಾನೇನು ಮಾತನಾಡೋಕೆ ಹೋಗಲ್ಲ ಎಂದು ಸಚಿವ ಎಂ ಬಿ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಹೇಳುವರೆಗೂ ನಾನೇ ಮುಖ್ಯಮಂತ್ರಿ, ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಇಬ್ಬರು ತಮ್ಮ ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಮ್ಮಲ್ಲಿ ಹೈಕಮಾಂಡ್ ಅಂತಿಮ. ಯಾರೇ ಏನೇ ಹೇಳಿದರೂ ಹೈಕಮಾಂಡ್ ಸುಪ್ರೀಂ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೆ ಅದು ಮುಖ್ಯಮಂತ್ರಿ, ಡಿಸಿಎಂ, ಎಂ.ಬಿ. ಪಾಟೀಲ್ ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ ಎಂದರು. ಅಲ್ಲದೇ, ಹೈಕಮಾಂಡ್ ಫೈನಲ್, ನೋ ಕಾಮೆಂಟ್ಸ್. ಮುಖ್ಯಮಂತ್ರಿ ಪವರ್ ಶೇರಿಂಗ್ ಬಗ್ಗೆ ನೋ ಕಾಮೆಂಟ್ಸ್ ಅದನ್ನು ಬಿಟ್ಟಿ ಬಿಡಿ ಎಂದರು.
ಇನ್ನೂ ಬೆಳಗಾವಿಯ ಅಧಿವೇಶನ ಡಿನ್ನರ್ ಅಧಿವೇಶನ ಆಯ್ತು ಎಂದು ಬಿಜೆಪಿಗರ ಆರೋಪಕ್ಕೆ ಪಾಪ ಬೆಂಗಳೂರಿನಿಂದ ಬಂದಿರ್ತಾರೆ. ಊಟ ಮಾಡದೇ ಉಪವಾಸ ಇರಬೇಕಾ!? ಬಿಜೆಪಿಯವರ ತಮ್ಮ ತಮ್ಮವರು ಊಟ ಮಾಡಿರುತ್ತಾರೆ. ಅದರಲ್ಲಿ ತಪ್ಪೇನಿದೆ. ಅವರವರ ಸಮಾಜದವರು, ದಲಿತ ಸಮಾಜದವರು ಸೇರಿದ್ದಾರೆ. ಲಿಂಗಾಯತ ಶಾಸಕರು ಸೇರಿಲ್ಲ. ನಾವು ಶೀಘ್ರವೇ ಸೇರುತ್ತೇವೆ. ಲಿಂಗಾಯತ ಶಾಸಕರ ಸಭೆ ಸೇರುವಾಗ ಮುಂಚಿತವಾಗಿ ಮಾಧ್ಯಮಗಳಿಗೆ ಹೇಳ್ತೀನಿ ಎಂದರು.
ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ - ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ವಿಜಯೇಂದ್ರ ಇಸ್ ಔಟ್ ಗೋಯಿಂಗ್ ಬಿಜೆಪಿ ಸ್ಟೇಟ್ ಪ್ರೆಸಿಡೆಂಟ್. ಎನಿ ಟೈಮ್ ಎನಿ ಮೂವ್ಮೆಂಟ್ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹೋಗುತ್ತದೆ. ವಿಜಯೇಂದ್ರ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ಹೇಳಿ. ತಮ್ಮ ಕುರ್ಚಿ ಅಲ್ಲಾಡುತ್ತಿದೆ, ನಮ್ಮ ಕುರ್ಚಿ ಬಗ್ಗೆ ಚಿಂತೆ ಯಾಕೆ..!? ನಿಮ್ಮ ಚಿಂತಿ ಮಾಡಿ ನಿಮ್ಮ ಕುರ್ಚಿ ಉಳಿಸಿಕೊಳ್ಳಿ ಎಂದು ವಿಜಯೇಂದ್ರಗೆ ಸಚಿವ ಎಂಬಿ ಪಾಟೀಲ್ ಸಲಹೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande