
ಹೊಸಪೇಟೆ, 03 ನವೆಂಬರ್ (ಹಿ.ಸ.) :
ಆ್ಯಂಕರ್ : ಹೊಸಪೇಟೆ ನಗರಸಭೆ ವ್ಯಾಪ್ತಿಯೊಳಗೆ ವ್ಯಾಪರ ಉದ್ದಿಮೆ ಮಾಡುತ್ತಿರುವ ಉದ್ದಿಮೆಗಳು ಕಡ್ಡಾಯವಾಗಿ ಕರ್ನಾಟಕ ಪೌರಸಭೆ ಆಧಿನಿಯಯ 1964 ಕಲಂ 256ರ ಕಾಯ್ದೆ ಪ್ರಕಾರ ವ್ಯಾಪಾರ ಉದ್ದಿಮೆ ಪರವಾನಿಗೆ ಪಡೆದುಕೊಳ್ಳಬೇಕು ಮತ್ತು ಪರವಾನಿಗೆ ಇದ್ದಲ್ಲಿ ಅದನ್ನು ನವೀಕರಿಸಿಕೊಳ್ಳಬೇಕು.
ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವವರು ನ.10 ರೊಳಗೆ ಪರವಾನಿಗೆ ಪಡೆಯತಕ್ಕದ್ದು. ತಪ್ಪಿದ್ದಲ್ಲಿ ಕರ್ನಾಟಕ ಪೌರಸಭೆ ಆಧಿನಿಯಮದಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್