
ನವದೆಹಲಿ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪೂರ್ವ ಕರಾವಳಿಯತ್ತ ಅಬ್ಬರಿಸುತ್ತಿರುವ ‘ಮೋಂತಾ’ ಚಂಡಮಾರುತ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ಸಿದ್ಧತೆಗಳ ಕುರಿತು ಉನ್ನತ ಮಟ್ಟದ ಸಭೆ ನಡೆಸಿ ಪರಿಶೀಲನೆ ಮಾಡಿದರು.
ಸಚಿವರು ಅಧಿಕಾರಿಗಳಿಗೆ ಆಂಧ್ರಪ್ರದೇಶ, ಒಡಿಶಾ ಹಾಗೂ ತೆಲಂಗಾಣ ರಾಜ್ಯಗಳ ಕರಾವಳಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಸೂಚಿಸಿದರು. ರೈಲ್ವೆ ಇಲಾಖೆಯ ಸಿದ್ಧತೆಗಳ ಕುರಿತು ವಿಶಿಷ್ಟವಾಗಿ ವಿಮರ್ಶೆ ನಡೆಸಿ, ರೈಲ್ವೆ ಸಂಚಾರ ಮತ್ತು ಸುರಕ್ಷತೆ ಕ್ರಮಗಳನ್ನು ಬಲಪಡಿಸಲು ನಿರ್ದೇಶನ ನೀಡಿದರು.
ಮೋಂತಾ ಚಂಡಮಾರುತದ ಸಾಧ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ವಿಜಯವಾಡ, ವಿಶಾಖಪಟ್ಟಣಂ ಮತ್ತು ಗುಂಟೂರು ವಿಭಾಗಗಳಲ್ಲಿ ಮಾನವ ಸಂಪನ್ಮೂಲ, ಯಂತ್ರೋಪಕರಣ ಮತ್ತು ಅಗತ್ಯ ಸಾಮಗ್ರಿಗಳನ್ನು ತುರ್ತು ಸಂದರ್ಭಗಳಿಗೆ ಸಜ್ಜುಗೊಳಿಸಲಾಗಿದೆ.
ಈ ಕುರಿತು ವೈಷ್ಣವ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಎಲ್ಲಾ ವಿಭಾಗೀಯ ಯುದ್ಧ ಕೊಠಡಿಗಳು ಸಕ್ರಿಯಗೊಂಡಿದ್ದು, ನೈಜ ಕಾಲದಲ್ಲಿ ಪರಿಸ್ಥಿತಿ ಮೇಲ್ವಿಚಾರಣೆ ಮತ್ತು ಸಂಯೋಜನೆ ನಡೆಯುತ್ತಿದೆ,” ಎಂದು ಅವರು ಹೇಳಿದರು.
ಈಸ್ಟ್ ಕೋಸ್ಟ್ ರೈಲ್ವೆ, ಸೌತ್ ಕೋಸ್ಟ್ ರೈಲ್ವೆ ಮತ್ತು ಸೌತ್ ಸೆಂಟ್ರಲ್ ರೈಲ್ವೆ ವಲಯಗಳಿಗೆ ತುರ್ತು ಪ್ರತಿಕ್ರಿಯೆಗಾಗಿ ಸಂಪನ್ಮೂಲಗಳನ್ನು ಸಂಗ್ರಹಿಸಲು ಹಾಗೂ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa