ನಾಡಿನೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ
ಗಣೇಶ ಚತುರ್ಥಿಯ ಒಂದು ದಿನದ ಮುಂಚೆ ಗೌರಿ ದೇವಿಯ ಆರಾಧನೆ
ಗಣೇಶ ಚತುರ್ಥಿಯ ಒಂದು ದಿನದ ಮುಂಚೆ ಗೌರಿ ದೇವಿಯ ಆರಾಧನೆ


ಬೆಂಗಳೂರು, 06 ಸೆಪ್ಟೆಂಬರ್(ಹಿ.ಸ.) :

ಆ್ಯಂಕರ್ : ನಾಡಿನೆಲ್ಲೆಡೆ ಇಂದು ಗೌರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಗಣೇಶ ಚತುರ್ಥಿಯ ಒಂದು ದಿನದ ಮುಂಚೆ ಪಾರ್ವತಿ ದೇವಿಯ ಅವತಾರವಾದ ಗೌರಿ ದೇವಿಯನ್ನು ಇಂದು ಮನೆಗೆ ತಂದು ಪೂಜಿಸಲಾಗುತ್ತದೆ. ಈ ಹಬ್ಬವನ್ನು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಭಾರಿ ವಿಜ್ರಂಭಣೆಯಿಂದ ಮಾಡಲಾಗುತ್ತದೆ.

ಸಂತೋಷದ ದಾಂಪತ್ಯ ಜೀವನಕ್ಕಾಗಿ ಮಹಿಳೆಯರು ಇಂದು ಸ್ವರ್ಣಗೌರಿ ವ್ರತವನ್ನು ಮಾಡುತ್ತಾರೆ. ಈ ದಿನದಂದು ವಿವಾಹಿತ ಮಹಿಳೆಯರು, ಗಂಡನ ಮನೆಯಲ್ಲಿ ಪೂಜೆ ನೆರವೇರಿಸಿ ತಾಯಿ ಮನೆಗೆ ಬರುತ್ತಾರೆ. ಅಲ್ಲಿ ನಡೆಯುವ ಗೌರಿ ಪೂಜೆಯಲ್ಲಿ ಭಾಗಿಯಾಗಿ ಆಶೀರ್ವಾದ ಪಡೆಯುತ್ತಾಳೆ.

ಗೌರಿ ಪೂಜೆಗೆ ಸಮಯ

ಗೌರಿ ಹಬ್ಬದ ತಿಥಿ ಆರಂಭ: ಸೆಪ್ಟೆಂಬರ್‌ 5 ರಂದು ಗುರುವಾರ ಮಧ್ಯಾಹ್ನ 12:21

ಗೌರಿ ಹಬ್ಬದ ತಿಥಿ ಮುಕ್ತಾಯ: ಸೆಪ್ಟೆಂಬರ್‌ 6 ರಂದು ಶುಕ್ರವಾರ ಮಧ್ಯಾಹ್ನ 3:01 ರವರೆಗೆ

ಗೌರಿ ಪೂಜೆ ಮುಹೂರ್ತ : ಇಂದು ಮುಂಜಾನೆ 5:32 ರಿಂದ ಬೆಳಗ್ಗೆ 8:01 ರವರೆಗೆ

ರಾಹುಕಾಲ: ಬೆಳಗ್ಗೆ 10.45 ರಿಂದ ಮಧ್ಯಾಹ್ನ 12.19

ಸೂರ್ಯೋದಯ: ಬೆಳಗ್ಗೆ 06.02 – ಸಂಜೆ 06.39

ಅಭಿಜಿತ್ ಮುಹೂರ್ತ: ಬೆಳಗ್ಗೆ 11.54 – ಮಧ್ಯಾಹ್ನ 12.45

ವಿಜಯ ಮುಹೂರ್ತ: ಮಧ್ಯಾಹ್ನ 02.38 – 03.29 ಮಧ್ಯಾಹ್ನ

ಮಹಿಳೆಯರು ಗೌರಿ ಪೂಜೆ ಮಾಡುವುದರಿಂದ ಸಾಮರಸ್ಯ ಮತ್ತು ಸಂತೋಷದ ದಾಂಪತ್ಯ ಜೀವನವನ್ನು ಪಡೆದುಕೊಳ್ಳುತ್ತಾರೆ ಅನ್ನೋ ನಂಬಿಕೆ ಇದೆ. ಆರೋಗ್ಯ ಸಮಸ್ಯೆಗಳು ದೂರಾಗುವುದು, ಸಂಪತ್ತು ವೃದ್ಧಿ, ದೋಷಗಳು ಇದ್ದರೆ ಪರಿಹಾರ, ಮಾನಸಿಕ ಶಾಂತಿ, ಬಯಸಿದ ಬೇಡಿಕೆ ಈಡೇರಿಕೆ, ಭೌತಿಕ, ಆಧ್ಯಾತ್ಮಿಕ ಜೀವನ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande