ವಿಕ್ರಮ ಕಟ್ಟಡದ ವಿಸ್ತೃತ ಕಚೇರಿ ಉದ್ಘಾಟನೆ
ವಿಕ್ರಮ ಕಟ್ಟಡದ ವಿಸ್ತೃತ ಕಚೇರಿ ಉದ್ಘಾಟನೆ
ವಿಕ್ರಮ ಕಟ್ಟಡದ ವಿಸ್ತೃತ ಕಚೇರಿ ಉದ್ಘಾಟನೆ


ಬೆಂಗಳೂರು, 19 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್ : ವಿಕ್ರಮ ಕಟ್ಟಡದ ನೂತನ ವಿಸ್ತೃತ ಕಚೇರಿ ಉದ್ಘಾಟನೆ ಕಾರ್ಯಕ್ರಮವು ಚಾಮರಾಜಪೇಟೆಯಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿ ಅವರು ಭಾರತಮಾತೆಗೆ ದೀಪ ಬೆಳಗುವ ಮೂಲಕ ಕಚೇರಿಯನ್ನು ಉದ್ಘಾಟಿಸಿದರು.

ವಿಕ್ರಮ ಪ್ರಕಾಶನ ಟ್ರಸ್ಟ್ ನ ವಿಶ್ವಸ್ಥ ಪ್ರೊ. ಬಿ.ವಿ. ಶ್ರೀಧರಸ್ವಾಮಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಪ್ರಚಾರಕ್ ಸುಧೀರ್, ಪ್ರಾಂತ ಪ್ರಚಾರಕ್ ಗುರುಪ್ರಸಾದ್, ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ವಿಶ್ವ ಸಂವಾದ ಕೇಂದ್ರದ ಟ್ರಸ್ಟಿ ರಾಧಾಕೃಷ್ಣ ಹೊಳ್ಳ, ಸಂವಾದ ಚಾನೆಲ್ ಸಂಪಾದಕ ವೃಷಾಂಕ್ ಭಟ್, ವಿಕ್ರಮ ವಾರಪತ್ರಿಕೆ ಸಂಪಾದಕ ರಮೇಶ್ ದೊಡ್ಡಪುರ, ಸಂವಾದ ವರ್ಲ್ಡ್ ಸಂಪಾದಕ ಪ್ರಶಾಂತ್ ವೈದ್ಯರಾಜ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande