ಹಿಂದುಳಿದ ಪಟ್ಟಿಗೆ ಮುಸ್ಲಿಮರು, ಮಹಾ ಸುಳ್ಳು-ರವಿವರ್ಮ ಕುಮಾರ
ಬೆಂಗಳೂರು, 25 ಏಪ್ರಿಲ್ (ಹಿ.ಸ): ಆ್ಯಂಕರ್ : ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಪತ್ರಿಕಾಗೋಷ್ಠಿ ಬೆಂಗಳೂರು. ಮಾಜ
ರವಿವರ್ಮ ಕುಮಾರ


ಬೆಂಗಳೂರು, 25 ಏಪ್ರಿಲ್ (ಹಿ.ಸ):

ಆ್ಯಂಕರ್ : ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಪತ್ರಿಕಾಗೋಷ್ಠಿ ಬೆಂಗಳೂರು.

ಮಾಜಿ ಅಡ್ವೋಕೆಟ್ ಜನರಲ್ ರವಿವರ್ಮ ಕುಮಾರ ಹೇಳಿಕೆ:

ಮುಸ್ಲಿಂ ರನ್ನು ಹಿಂದುಳಿದ ಪಟ್ಟಿಗೆ ಸೇರಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಹಿಂದುಳಿದ ಮೀಸಲಾತಿ ಮುಸ್ಲಿಂ ರಿಗೆ ಕೊಡಲಾಗಿದೆ ಅಂತಿದ್ದಾರೆ. ಪ್ರಧಾನಿ ಯವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದು ಮಹಾ ಸುಳ್ಳು. ಚುನಾವಣೆ ಸಂದರ್ಭದಲ್ಲಿ ತಪ್ಪು ದಾರಿಗೆ ಏಳೆಯುವ ಪ್ರಯತ್ನ ಆಗ್ತಿದೆ.

೧೮೭೪ ರಲ್ಲಿ ಮೀಸಲಾತಿ ಬಂತು. ೧೮೭೬ ರಲ್ಲಿ ಜಾತಿ ಜನಗಣತಿ ನಡೆಯಿತು.ಅದರ ಆಧಾರದ ಮೇಲೆ ಮೀಸಲಾತಿ ಒಡೆಯರ್ ಮೀಸಲಾತಿ ಕೊಟ್ಟರು. ೧೮೭೪ ರಲ್ಲಿ ೧೦ ಹುದ್ದೆಗಳಲ್ಲಿ ಬ್ರಾಹ್ಮಣ ರಿಗೆ ೨ ಹುದ್ದೆ/ಉಳಿದ ೮ ಹುದ್ದೆ ಮುಸ್ಲಿಂ ಮತ್ತು ಇತರರಿಗೆ ಕೊಡಲಾಯಿತು.

೧೮೭೪ ರಿಂದ ಮುಸ್ಲಿಂ ರಿಗೆ ಮೀಸಲಾತಿ ಇದೆ. ಸತ್ಯವನ್ನು ಮರೆಮಾಚಿ ಸುಳ್ಳು ಹೇಳಲಾಗ್ತಿದೆ.

ಮೀಸಲಾತಿ ಬದಲಾವಣೆ ಬಗ್ಗೆ ಈ ಸರ್ಕಾರ ಎನೂ ಮಾಡಿಲ್ಲ. ದೇವರಾಜ್ ಅರಸು ಸರ್ಕಾರ ೧೯೭೨ ರಲ್ಲಿ ಹಾವನೂರು ಆಯೋಗ ಮಾಡಿದೆ. ೧೯೭೫ ರಲ್ಲಿ ಆಯೋಗ ವರದಿ ಸಲ್ಲಿಕೆ ಮಾಡಿತು. ವರದಿಗೆ ವಿರೋಧ - ಪರ ಅಭಿಪ್ರಾಯ ಬಂತು.

೨೨-೦೨-೧೯೭೭ ರಲ್ಲಿ ಹಾವನೂರು ಆಯೋಗದ ವರದಿ ಜಾರಿ ಮಾಡಲಾಯಿತು. ದೇವರಾಜ್ ಅರಸು ಅವರು ವರದಿ ಜಾರಿ ಮಾಡಿ ಹಿಂದುಳಿದವರಿಗೆ ಮೀಸಲಾತಿ ಕೊಟ್ಟರು. ಜೊತೆಗೆ ಮುಸ್ಲಿಂ ರನ್ನು ಹಿಂದುಳಿದ ಜಾತಿ ಅಂತ ಮೀಸಲಾತಿ ಕೊಡಲಾಯಿತು.

ಮುಸ್ಲೀರಂರಿಗೆ ಕೊಟ್ಟ ಮೀಸಲಾತಿಗೆ ಸುಮಾರು ೧೫೦ ವರ್ಷ ಇತಿಹಾಸವಿದೆ. ಇದರ ವಿರುದ್ದ ಕೋ ಚನ್ನಬಸಪ್ಪ ಮೊಕದ್ದಮೆ ಹೂಡಿದರು. ಲಿಂಗಾಯತ ಪರ ವಾದ ಮಂಡಿಸಿದರು. ಸೋಮಶೇಖರ್ ಎಂಬುವರು ವಾದಿಯಾಗಿದ್ದರು. ಸೋಮಶೇಖರ್ ಕೇಸ್ ಅಂತ ಕರೆಯಲಾಗ್ತಿದೆ.

೧೯೭೯ ರಲ್ಲಿ ಹೈಕೋರ್ಟ್ ಮುಸ್ಲಿಂ ಮೀಸಲಾತಿ ಪರ ತೀರ್ಪು ಕೊಡ್ತು. ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಯಿತು. ಸುಪ್ರೀಂ ಕೋರ್ಟ್ ಸಹ ಮುಸ್ಲಿಂ ಮೀಸಲಾತಿ ಎತ್ತಿಹಿಡಿಯಿತು. ಪ್ರಧಾನ ಮಂತ್ರಿ ಸುಳ್ಳು ಹೇಳ್ತಿದ್ದಾರೆ. ಇದು ಈಗಿನ ಮೀಸಲಾತಿ ಅಲ್ಲ. ಇದು ೧೫೦ ವರ್ಷಗಳಿಂದ ಕೊಡಲಾಗಿದೆ.

ಮುಸ್ಲಿಂ ರಿಗೆ ೪% ಮೀಸಲಾತಿ ರಾಮಕೃಷ್ಣ ಹೆಗಡೆ ಸರ್ಕಾರ ಮಾಡಿದ್ದು. ಲಿಂಗಾಯತರಿ ಗೆ ಹಿಂದುಳಿದ ೩ ಬಿ ಅನ್ವಯ ಮೀಸಲಾತಿ ಕೊಡಲಾಯಿತು. ೨ ಬಿ ಅನ್ವಯ ಮುಸ್ಲಿಂ ರಿಗೆ ಮೀಸಲಾತಿ ನೀಡಲಾಯಿತು. ಇದು ಕಾಂಗ್ರೆಸ್ ಸರ್ಕಾರ ಮಾಡಿದ್ದಲ್ಲ. ರಾಮಕೃಷ್ಣ ಹೆಗಡೆ ಸರ್ಕಾರ ಮಾಡಿದ್ದು.

ದೇವೆಗೌಡರು ಆ ಸರ್ಕಾರದಲ್ಲಿ ಈ ಆದೇಶ ಮಾಡಿದ್ದು. ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದಗೌಡ, ಶೆಟ್ಟರ್ ಸರ್ಕಾರ ಈ ಮೀಸಲಾತಿ ಯನ್ನು ಮುಂದುವರಿಸಿದೆ.

೧೩/೧೦/೧೯೮೬ ರಲ್ಲಿ ಮುಸ್ಲಿಂ ರಿಗೆ ೨ ಬಿ ಅನ್ವಯ ೪% ಮೀಸಲಾತಿ ಕೊಟ್ಟಿರುವುದು. ಧರ್ಮದ ಆಧಾರಿತ ಮುಸ್ಲಿಂ ಮೀಸಲಾತಿ ಕೊಟ್ಟಿಲ್ಲ, ಅದು ಸುಳ್ಳು. ಇದು ರಾಜಕೀಯ, ಈ ಮೀಸಲಾತಿಯನ್ನು ನ್ಯಾಯಾಂಗದಲ್ಲಿ ಒಪ್ಪಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಟ್ಟಿದ್ದು.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹಂಸರಾಜ್ ಗಂಗಾರಾಮ್ ಅಹೀರ್ ಬಿಜೆಪಿ ಬಾಲಬುಡುಕ. ಚುನಾವಣೆಯಲ್ಲಿ ಸೋತವನು ಅವನು. ಆತನಿಗೆ ಕಾಂಗ್ರೆಸ್ ಮೇಲೆ ಸಿಟ್ಟಿದೆ. ಈಗ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಆಗಿದ್ದಾರೆ. ೧೯೯೩ ರಲ್ಲಿ ಆಯೋಗ ಅಸ್ತಿತ್ವಕ್ಕೆ ಬಂದಿದೆ.

ಯಾವತ್ತೂ ರಾಷ್ಟ್ರೀಯ ಆಯೋಗ ಕರ್ನಾಟಕ ಮೀಸಲಾತಿ ಬಗ್ಗೆ ಚಕಾರ ಎತ್ತಿಲ್ಲ. ಮುಸ್ಲಿಂ ಹಿಂದುಗಳ ವಿಂಗಡಣೆ ಪ್ರಯತ್ನದ ಭಾಗವಾಗಿ ಈ ಹೇಳಿಕೆ ಕೊಟ್ಟಿದ್ದಾನೆ. ರಾಷ್ಟ್ರೀಯ ಆಯೋಗಕ್ಕೆ ರಾಜ್ಯದ ಜಾತಿ ಪಟ್ಟಿ ಬಗ್ಗೆ ಮಾತಾಡುವ ಅಧಿಕಾರ ಇಲ್ಲ.ಇದು ಆಯೋಗದ ತಿರ್ಮಾನ ಅಲ್ಲ,

ಅಧ್ಯಕ್ಷ ರ ವೈಯಕ್ತಿಕ ಅಭಿಪ್ರಾಯ ಅಷ್ಟೇ.

ರಾಜ್ಯ ಸರ್ಕಾರಕ್ಕೆ ಹಿಂದುಳಿದ ಪಟ್ಟಿ ಮಾಡಲು ಅವಕಾಶ ಇದೆ ಅಂತ ಮೋದಿ ಸರ್ಕಾರ ತಿದ್ದುಪಡಿ ಮಾಡಿದೆ. ೧೫/೦೯/೨೦೨೧ ರಲ್ಲಿ ೧೦೫ ಸಂವಿಧಾನ ತಿದ್ದುಪಡಿ ಮೂಲಕ ಆದೇಶ ಮಾಡಲಾಗಿದೆ.

ಸಂವಿಧಾನದ ಸೆಕ್ಷನ್ ೧೪೨/ಎ/೩ ಅನ್ವಯ ಆದೇಶ ಮಾಡಲಾಗಿದೆ. ಇಷ್ಟಾದರೂ ಆಯೋಗದ ಅಧ್ಯಕ್ಷ ಸುಳ್ಳು ಹೇಳಿಕೆ ನೀಡಿದ್ದಾನೆ. ಬಿಜೆಪಿ ಪರವಾಗಿ ಹೇಳಿಕೆ ನೀಡಿದ್ದಾನೆ.

ಆಯೋಗದ ಅಧ್ಯಕ್ಷ ನ ಹೇಳಿಕೆ ಖಂಡಿಸುತ್ತೇನೆ. ಅಧ್ಯಕ್ಷ ಸ್ಥಾನದಿಂದ ಆತನನ್ನು ತೆಗೆಯಬೇಕು.

ಆತನ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು.ಈ ಹೇಳಿಕೆ ಚುನಾವಣೆಗಾಗಿಯೇ ನೀಡಿದ ಹೇಳಿಕೆ. ಆತನನ್ನು ತಕ್ಷಣ ವಜಾ ಮಾಡಬೇಕು.

ಮುಸ್ಲಿಂ ರಿಗೆ ಕೊಟ್ಟ ಮೀಸಲಾತಿ ಯನ್ನು ಬೊಮ್ಮಾಯಿ ಸರ್ಕಾರ ಕಿತ್ತು ಹಾಕಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಯಿತು. ಈ ಪ್ರಕರಣದ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರ, ಮೀಸಲಾತಿ ಆದೇಶ ಜಾರಿ ಮಾಡಲ್ಲ ಅಂತ ಹೇಳಿತು.ಅದು ಇನ್ನೂ ಕೋರ್ಟ್ ನಲ್ಲಿದೆ.

ಆಯೋಗದ ಅಧ್ಯಕ್ಷನಾಗಿ ಆತ ಮುಂದುವರಿಯಬಾರದು. ಚುನಾವಣಾ ಆಯೋಗ ಎನು ಕ್ರಮ ಕೈಗೊಳ್ಳಲಿದೆ ಅಂತ ನೋಡ್ತೇನೆ. ಸೂಕ್ತ ಕಾನೂನು ಕ್ರಮವನ್ನು ಜರುಗಿಸುವ ಬಗ್ಗೆ ತಿರ್ಮಾನ ಮಾಡ್ತೇವೆ-ರವಿವರ್ಮ ಕುಮಾರ್ ಎಚ್ಚರಿಕೆ.

ಹಿಂದೂಸ್ತಾನ್ ಸಮಾಚಾರ್


 rajesh pande