ಇಂದು ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ
ಬೆಂಗಳೂರು, 15 ಏಪ್ರಿಲ್ (ಹಿ.ಸ):ಆ್ಯಂಕರ್:ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಯ ಶಾಕಿಂಗ್ ಸುದ್ದಿಯಿಂದ ಚಿತ್ರರಂಗ
ಸದ್ಯ ಜಗದೀಶ್ ಅಂತಿಮ ಕಾರ್ಯಕ್ಕೆ ಸಕಲ ಸಿದ್ಧತೆ ನಡೆದಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಅಂತಿಮ ಸಂಸ್ಕಾರ ನಡೆಯುವ ಸಾಧ್ಯತೆಯಿದೆ. ಹಾಸನ ಜಿಲ್ಲೆ ಸಮೀಪದ ಹಿರೀಸಾವೆ ಬಳಿಯ ಫಾರ್ಮ್ ಹೌಸ್ನಲ್ಲಿ ವಿಧಿ ವಿಧಾನಗಳು ನಡೆಯಲಿದ್ದು, ಪೂರ್ವ ತಯಾರಿಗಳು ನಡೆಯುತ್ತಿವೆ.


ಬೆಂಗಳೂರು, 15 ಏಪ್ರಿಲ್ (ಹಿ.ಸ):ಆ್ಯಂಕರ್:ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಯ ಶಾಕಿಂಗ್ ಸುದ್ದಿಯಿಂದ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ನಿನ್ನೆ ಬೆಳಗ್ಗೆ ವಿಷಯ ಗೊತ್ತಾದಮೇಲಿಂದ ಮಧ್ಯರಾತ್ರಿಯವರಿಗೂ ಮಿತ್ರರು, ಚಿತ್ರರಂಗ ಹಾಗೂ ಅಭಿಮಾನಿಗಳು ಸೇರಿದಂತೆ ಅಪಾರ ಮಂದಿ ಅಂತಿಮ ದರ್ಶನ ಪಡೆದರು. ಇಂದು ಅಂತಿಮ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಸೌಂದರ್ಯ ಜಗದೀಶ್. ಉದ್ಯಮಿಯಾಗಿ, ನಿರ್ಮಾಪಕನಾಗಿ ದೊಡ್ಡ ಹೆಸರು ಗಳಿಸಿದ ವ್ಯಕ್ತಿ. ಉದ್ಯಮಿ, ನಿರ್ಮಾಪಕ ಅನ್ನೋದ್ರ ಆಚೆಗೆ ತಮ್ಮ ವ್ಯಕ್ತಿತ್ವದಿಂದ ಎಲ್ಲರ ಮನಸ್ಸು ಗೆದ್ದಿದ್ರು. ಹೀಗಾಗಿ ಸೌಂದರ್ಯ ಜಗದೀಶ್ಗೆ ಗೆಳೆಯರ ಬಳಗ ತುಂಬಾ ದೊಡ್ಡದು. ಇಂಡಸ್ಟ್ರಿಯವ್ರ ಯಾವುದೇ ಕಾರ್ಯಕ್ರಮವಾದ್ರೂ ಅಲ್ಲಿ ಜಗದೀಶ್ ಹಾಜರಿ ಇದ್ದೇ ಇರ್ತಿತ್ತು. ಅವ್ರಿಗೆ ಕುಟುಂಬವೆಂದರೇ ಎಲ್ಲಿಲ್ಲದ ಪ್ರೀತಿ. ಪತ್ನಿ-ಮಕ್ಕಳನ್ನು ಬಿಟ್ಟು ಇರುತ್ತಿರಲಿಲ್ಲ. ಇದೇ ಕಾರಣಕ್ಕಾಗಿಯೇ ಸೌಂದರ್ಯ ಜಗದೀಶ್ ಆತ್ಮಹತ್ಯೆ ಸುದ್ದಿಯನ್ನ ಯಾರೂ ನಂಬಿರಲಿಲ್ಲ. ಕುಟುಂಬವನ್ನ ಅನಾಥ ಮಾಡಿ, ಜಗದೀಶ್ ಆತ್ಮಹತ್ಯೆ ಮಾಡಿಕೊಳ್ಳೋಕೆ ಸಾಧ್ಯನಾ..? ಅಂತ ಎಲ್ಲರ ಮನಸ್ಸಲ್ಲೂ ಪ್ರಶ್ನೆ ಹುಟ್ಟಿತ್ತು.

ಸದ್ಯ ಜಗದೀಶ್ ಅಂತಿಮ ಕಾರ್ಯಕ್ಕೆ ಸಕಲ ಸಿದ್ಧತೆ ನಡೆದಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಅಂತಿಮ ಸಂಸ್ಕಾರ ನಡೆಯುವ ಸಾಧ್ಯತೆಯಿದೆ. ಹಾಸನ ಜಿಲ್ಲೆ ಸಮೀಪದ ಹಿರೀಸಾವೆ ಬಳಿಯ ಫಾರ್ಮ್ ಹೌಸ್ನಲ್ಲಿ ವಿಧಿ ವಿಧಾನಗಳು ನಡೆಯಲಿದ್ದು, ಪೂರ್ವ ತಯಾರಿಗಳು ನಡೆಯುತ್ತಿವೆ.

ಹಿಂದೂಸ್ತಾನ್ ಸಮಾಚಾರ್


 rajesh pande