ರೈಲುಗಳ ಸೇವೆ ರದ್ದು
ಹುಬ್ಬಳ್ಳಿ, ೮ ಜೂನ(ಹಿ.ಸ) : ಆ್ಯಂಕರ್ : ಒಡಿಶಾದಲ್ಲಿ ಸಂಭವಿಸಿದ್ದ ರೈಲು ದುರಂತ ಹಿನ್ನೆಲೆಯಲ್ಲಿ ಬಹನಾಗಾ ಬಜಾರ್ ನಿಲ್ದ
ರೈಲುಗಳ ಸೇವೆ ರದ್ದು


ಹುಬ್ಬಳ್ಳಿ, ೮ ಜೂನ(ಹಿ.ಸ) :

ಆ್ಯಂಕರ್ : ಒಡಿಶಾದಲ್ಲಿ ಸಂಭವಿಸಿದ್ದ ರೈಲು ದುರಂತ ಹಿನ್ನೆಲೆಯಲ್ಲಿ ಬಹನಾಗಾ ಬಜಾರ್ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಸಲುವಾಗಿ ಕೆಲವು ರೈಲುಗಳ ಸೇವೆಯನ್ನು ರದ್ದು ಮಾಡಲು ಆಗ್ನೇಯ ರೈಲ್ವೆಯು ಸೂಚಿಸಿದೆ ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೇ ಎರಡು ರೈಲು ಸೇವೆಗಳನ್ನು ಸ್ಥಗಿತಗೊಳಿಸಿದೆ.

ಜೂನ್ 9 ರಂದು ಹೌರಾ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22817 ಹೌರಾ-ಮೈಸೂರು ಎಕ್ಸ್ಪ್ರೆಸ್ ರೈಲನ್ನು ರದ್ದುಗೊಳಿಸಲಾಗಿದೆ ಅದೇ ರೀತಿ ಜೂನ್ 11 ರಂದು ಮೈಸೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 22818 ಮೈಸೂರು-ಹೌರಾ ಎಕ್ಸ್ಪ್ರೆಸ್ ರೈಲನ್ನು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೇಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನಿಶ ಹೆಗಡೆ ತಿಳಿಸಿದ್ದಾರೆ.

ಹಿಂದುಸ್ತಾನ್ ಸಮಾಚಾರ.


 rajesh pande