ರಸ್ತೆ ಅಪಘಾತ: ಉರುಸ್ ಗೆ ಹೊರಟಿದ್ದ ಐದು ಜನರು ಸ್ಥಳದಲ್ಲೇ ಸಾವು!
ಯಾದಗಿರಿ, 6ಜೂನ್ (ಹಿ.ಸ): ಆ್ಯಂಕರ್: ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿಯಾಗಿ 5 ಜನ ಮೃತಪಟ್ಟು, 13 ಜನರು ಗ
ೈೈ


ಯಾದಗಿರಿ, 6ಜೂನ್ (ಹಿ.ಸ):

ಆ್ಯಂಕರ್:

ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿಯಾಗಿ 5 ಜನ ಮೃತಪಟ್ಟು, 13 ಜನರು ಗಾಯಗೊಂಡಿರುವ ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಇಂದು ನಸುಕಿನ ಜಾವ 2.30 ರ ಸಮಯ ಅಪಘಾತ ಸಂಭವಿಸಿದೆ.

ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯಿಂದ ಕಲಬುರಗಿಯ ಖಾಜಾ ಬಂದೇನವಾಜ ದರ್ಗಾದ ಉರುಸ್ ಜಾತ್ರೆಗೆ ತೆರಳುತ್ತಿದ್ದರು. ಈ ವೇಳೆ ಬಳಿಚಕ್ರ ಬಳಿ ರಸ್ತೆ ಪಕ್ಕ ನಿಲ್ಲಿಸಿದ್ದ ಲಾರಿಗೆ ಕ್ರೂಷರ್ ಡಿಕ್ಕಿಯಾಗಿದೆ. ವೇಗವಾಗಿ ಬಂದು ಡಿಕ್ಕಿಯಾಗಿರುವ ರಭಸಕ್ಕೆ ಕ್ರೂಷರ್ನಲ್ಲಿದ್ದ 5 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಬಾಲಕಿ, ಓರ್ವ ಬಾಲಕ ಸಾವು ಸೇರಿದಂತೆ ಐದು ದುರ್ಮರಣ ಮುನೀರ್( 40), ನಯಾಮತ್ (40), ಮುದ್ದತ್ ಶಿರ್ ( 12), ರಮಿಜಾ ಬೇಗಂ (50) ಹಾಗೂ ಸುಮ್ಮಿ (12) ಮೃತರು 13ಜನರು ಗಾಯಾಳುಗಳನ್ನು ರಾಯಚೂರಿನ ರೀಮ್ಸ್ ಆಸ್ಪತ್ರೆಗೆ ದಾಖಲು

ಹಿಂದೂಸ್ತಾನ್ ಸಮಾಚಾರ್


 rajesh pande