
ನವದೆಹಲಿ, 02 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ನಿರ್ಭೀತಿಯಿಂದ ದಾನ ಮಾಡುವುದರ ಜತೆಗೆ ಜೀವ ರಕ್ಷಣೆಯ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಬುಧವಾರ ‘ಎಕ್ಸ್’ನಲ್ಲಿ ಸಂಸ್ಕೃತದ ಸುಭಾಷಿತವೊಂದನ್ನು ಹಂಚಿಕೊಂಡಿದ್ದು, “ಅಭಯಸ್ಯೈವ ಯೋ ದಾತಾ ತಸ್ಯೈವ ಸುಮಹತ್ಫಲಮ್. ನ ಹಿ ಪ್ರಾಣಸಮಂ ದಾನಂ ತ್ರಿಷು ಲೋಕೇಷು ವಿದ್ಯತೇ” ಎಂದು ತಿಳಿಸಿದ್ದಾರೆ.
ಇತರರ ಭಯವನ್ನು ದೂರ ಮಾಡಿ ಅವರಿಗೆ ಅಭಯ ನೀಡುವವರಿಗೆ ಮಹತ್ತರ ಫಲ ದೊರೆಯುತ್ತದೆ. ಮೂರು ಲೋಕಗಳಲ್ಲಿಯೂ ಜೀವ ರಕ್ಷಣೆಗಿಂತ ಶ್ರೇಷ್ಠವಾದ ದಾನ ಮತ್ತೊಂದಿಲ್ಲ ಎಂಬುದು ಈ ಸುಭಾಷಿತದ ಅರ್ಥ. ಮಾನವ ಜೀವ ರಕ್ಷಣೆಯೇ ಅತ್ಯುನ್ನತ ದಾನ ಎಂದು ಪ್ರಧಾನಿ ಮೋದಿ ಸಂದೇಶ ನೀಡಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.