ಬಿಹಾರದಲ್ಲಿ ದೇವಸ್ಥಾನದ ಬಳಿ ಕೀರ್ತನೆ ಮಾಡುತ್ತಿದ್ದವರ ಮೇಲೆ ವಾಹನ ಹರಿದು ಐವರ ಸಾವು; ಒಬ್ಬರ ಸ್ಥಿತಿ ಗಂಭೀರ
ಸುಪಾಲ್, 26 ಆಗಸ್ಟ್ 26 (ಹಿ.ಸ.): ಆ್ಯಂಕರ್: ಬಿಹಾರದ ಸುಪೌಲ್ ಜಿಲ್ಲೆಯ ಪಿಪ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಓರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಟಯ್ಯಾ ಚೌಕ್ ಬಳಿಯ ರಾಷ್ಟ್ರೀಯ ಹೆದ್ದಾರಿ-327ರ ಬದಿಯಲ್ಲ
बिहार के सुपौल में पांच लोगों को रौंदने के बाद एक घर में घुसी दुर्घटना ग्रस्त कार


ಸುಪಾಲ್, 26 ಆಗಸ್ಟ್ 26 (ಹಿ.ಸ.):

ಆ್ಯಂಕರ್:

ಬಿಹಾರದ ಸುಪೌಲ್ ಜಿಲ್ಲೆಯ ಪಿಪ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಓರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಟಯ್ಯಾ ಚೌಕ್ ಬಳಿಯ ರಾಷ್ಟ್ರೀಯ ಹೆದ್ದಾರಿ-327ರ ಬದಿಯಲ್ಲಿರುವ ಬಜರಂಗಬಲಿ ದೇವಸ್ಥಾನದ ಸಮೀಪ ಸುಮಾರು ಆರು ಮಂದಿ ಕೀರ್ತನೆ ಮಾಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ವಾಹನವು ಕೀರ್ತನೆ ಮಾಡುತ್ತಿದ್ದವರ ಮೇಲೆ ಹರಿದು, ಸುಮಾರು 50 ಮೀಟರ್ ದೂರ ಸಾಗಿ ರಸ್ತೆ ಬದಿಯಲ್ಲಿದ್ದ ಅಂಗಡಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ತಿಲಾಯಿ ದಾಸ್ (65), ರಾಜು ದಾಸ್ (50), ಸುರೇಂದ್ರ ಯಾದವ್ (45), ಭುವನೇಶ್ವರಿ ಯಾದವ್ ಅಲಿಯಾಸ್ ಕೊಯ್ಲಿ ಯಾದವ್ ಹಾಗೂ ಕೃಷ್ಣ ಮೋಹನ್ ಸಾಹ್ ಮೃತಪಟ್ಟಿದ್ದಾರೆ. ರಾಮಚಂದ್ರ ಯಾದವ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರೆಲ್ಲರೂ ಕಟಯ್ಯಾ ಪಂಚಾಯಿತಿಯ ನಿವಾಸಿಗಳಾಗಿದ್ದಾರೆ. ತಿಲಾಯಿ ದಾಸ್ ಮತ್ತು ರಾಜು ದಾಸ್ ವಾರ್ಡ್ 12, ಸುರೇಂದ್ರ ಯಾದವ್ ವಾರ್ಡ್ 15, ಭುವನೇಶ್ವರಿ ಯಾದವ್ ವಾರ್ಡ್ 11 ಹಾಗೂ ಕೃಷ್ಣ ಮೋಹನ್ ಸಾಹ್ ವಾರ್ಡ್ 13ರ ನಿವಾಸಿಗಳಾಗಿದ್ದರು. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಕುಟುಂಬಗಳಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಧಾವಿಸಿ ಅಪಘಾತಕ್ಕೆ ಕಾರಣವಾದ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತದ ನಿಖರ ಕಾರಣದ ಕುರಿತು ತನಿಖೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಸಾವನ್ ಕುಮಾರ್ ಅವರು ಘಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿಯನ್ನು ಕಳುಹಿಸಲಾಗಿದ್ದು, ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಘಟನೆಯಿಂದ ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬುಧವಾರ ಬೆಳಗ್ಗೆ ಗ್ರಾಮಸ್ಥರು ಕಟಯ್ಯಾ ಚೌಕ್ ಬಳಿಯ ರಸ್ತೆ ಬದಿಯಲ್ಲಿದ್ದ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಲು ಮುಂದಾದರು. ರಸ್ತೆ ಬದಿಯ ಅತಿಕ್ರಮಣ ಮತ್ತು ಅಂಗಡಿಗಳಿಂದಾಗಿ ಅಪಘಾತದ ಅಪಾಯ ಹೆಚ್ಚುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ರಸ್ತೆ ಬದಿಯ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande