
ಹಾಸನ, 21 ಜುಲೈ (ಹಿ.ಸ.):
ಆ್ಯಂಕರ್:
ತಮ್ಮ ತಾಯಿಯವರ ನಿಧನದ ಸಂದರ್ಭದಲ್ಲಿ ನಾಡಿನ ಜನತೆ ಹಾಗೂ ಮಾಧ್ಯಮಗಳು ತೋರಿದ ಪ್ರೀತಿ, ಅಭಿಮಾನ ಮತ್ತು ಬೆಂಬಲಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಾಯಿಯ 11ನೇ ದಿನದ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ತಾಯಿ ಕೇವಲ ನಮ್ಮ ಕುಟುಂಬಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಪ್ರತಿಯೊಬ್ಬ ಬಡವರನ್ನು ತಮ್ಮ ಮಕ್ಕಳಂತೆ ಕಂಡವರು. ಅವರ ಅಂತಿಮ ದಿನಗಳಲ್ಲಿ ಮಾಧ್ಯಮದ ಸ್ನೇಹಿತರು ತೋರಿದ ಸಂವೇದನೆ ಮತ್ತು 'ಅನ್ನಪೂರ್ಣೇಶ್ವರಿ'ಯಂತೆ ಅವರನ್ನು ಸ್ಮರಿಸಿದ ರೀತಿ ಸ್ಮರಣೀಯ ಎಂದು ತಿಳಿಸಿದ್ದಾರೆ. ಮುಂದುವರಿದು ಮಾತನಾಡುತ್ತ, ಸಮಾಧಿಗೆ 60 ಪವನ್ ಅರ್ಪಿಸುವ ಕಾರ್ಯಕ್ರಮ ಹಾಗೂ ಮುಂದಿನ ದಿನಗಳಲ್ಲಿ ನಡೆಯಲಿರುವ ಧಾರ್ಮಿಕ ವಿಧಿವಿಧಾನಗಳಿಗೆ ಕುಟುಂಬ ವರ್ಗದವರು ಹಾಗೂ ಸಾವಿರಾರು ಅಭಿಮಾನಿಗಳು ಒಟ್ಟಾಗಿ ಸಿದ್ಧತೆ ನಡೆಸುತ್ತಿದ್ದೇವೆ. ರಾಜಕೀಯವಾಗಿ ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ, ತಾಯಿಯ ಅಗಲಿಕೆಯ ದುಃಖದಲ್ಲಿ ರಾಜ್ಯದ ಜನತೆ ಮತ್ತು ಮಾಧ್ಯಮದವರು ನಿರಂತರವಾಗಿ ನಮ್ಮೊಂದಿಗೆ ನಿಂತು ಸಾಂತ್ವನ ಹೇಳಿದ್ದಾರೆ. ಈ ಕಷ್ಟದ ಸಮಯದಲ್ಲಿ ನಮಗೆ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರಿಗೂ ನನ್ನ ನಮನಗಳು ಎಂದು ಕೃತಜ್ಞತೆ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII