
ಜೈಪುರ, 26 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ರಾಜಸ್ಥಾನಕ್ಕೆ ಮೊದಲ ರಾಜ್ಯ ಭೇಟಿಗೆ ಆಗಮಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾಗಿದ ಬಳಿಕ ಅವರ ಇದು ಮೊದಲ ಪ್ರವಾಸವಾಗಿದ್ದು, ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ಉತ್ಸಾಹ ಮೂಡಿಸಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರವಣ್ ಸಿಂಗ್ ಬಾಗ್ರಿ ಅವರ ಪ್ರಕಾರ, ಜೈಪುರದಲ್ಲಿ ಸಾಂಪ್ರದಾಯಿಕ ರಾಜಸ್ಥಾನಿ ಶೈಲಿಯಲ್ಲಿ ಭವ್ಯ ಸ್ವಾಗತ ಏರ್ಪಡಿಸಲಾಗಿದೆ. ಪುಷ್ಕರ್ ಮತ್ತು ಗಂಗಾನಗರದ ಜಾನಪದ ಕಲಾವಿದರು ಡ್ರಮ್ ಮತ್ತು ಬ್ಯಾಗ್ಪೈಪರ್ಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ.
ನಿಗದಿತ ವೇಳಾಪಟ್ಟಿಯಂತೆ, ನಿತಿನ್ ನವೀನ್ ಬೆಳಿಗ್ಗೆ 10:30ಕ್ಕೆ ಜೈಪುರ ವಿಮಾನ ನಿಲ್ದಾಣ ತಲುಪಿದ ಬಳಿಕ ಟೋಂಕ್ಗೆ ತೆರಳಿ, ಬೆಳಿಗ್ಗೆ 11:30ಕ್ಕೆ ಬಿಜೆಪಿ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ಬುಂದಿ, ಪ್ರತಾಪ್ಗಢ, ಡುಂಗರ್ಪುರ, ಚುರು, ಪಾಲಿ ಮತ್ತು ಬಾರ್ಮರ್ ಜಿಲ್ಲೆಗಳ ಕಚೇರಿಗಳನ್ನು ವರ್ಚುವಲ್ ಮೂಲಕ ಉದ್ಘಾಟನೆ ಮಾಡಲಾಗುತ್ತದೆ. ಜೊತೆಗೆ ಜಲೋರ್ ಜಿಲ್ಲಾ ಕಚೇರಿಗೆ ವರ್ಚುವಲ್ ಶಂಕುಸ್ಥಾಪನೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಭಜನ್ ಲಾಲ್ ಶರ್ಮಾ, ಮದನ್ ರಾಥೋಡ್ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುವ ವ್ಯವಸ್ಥೆಯೂ ಇದೆ.
ಟೋಂಕ್ ಕಾರ್ಯಕ್ರಮದ ನಂತರ ಮಧ್ಯಾಹ್ನ 2:30ಕ್ಕೆ ನಿತಿನ್ ನವೀನ್ ಮತ್ತೆ ಜೈಪುರಕ್ಕೆ ಮರಳಲಿದ್ದಾರೆ. ವಿಮಾನ ನಿಲ್ದಾಣದ ಹೊರಗೆ ಬಾಗ್ರು, ಸಂಗನೇರ್, ಚಾಕ್ಸು ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಭವ್ಯ ಸ್ವಾಗತ ನೀಡಲಿದ್ದಾರೆ.
ಯುವ ಮೋರ್ಚಾ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಬೆಂಗಾವಲು ಪಡೆಯ ನೇತೃತ್ವ ವಹಿಸಲಿದ್ದಾರೆ. ಸಂಗನೇರ್, ಬಾಗ್ರು, ಚಾಕ್ಸು, ಬಸ್ಸಿ, ಫುಲೇರಾ, ಡುಡು, ಆಮೇರ್, ಜಾಮ್ವರಂಗಢ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ವಾಗತ ವೇದಿಕೆಗಳನ್ನು ನಿರ್ಮಿಸಲಾಗಿದೆ.
ನಗರದ ಪ್ರಮುಖ ಕೇಂದ್ರಗಳಾದ ಶಿಕ್ಷಾ ಸಂಕುಲ, ಕನೋಡಿಯಾ ಕಾಲೇಜು, ಜೆಡಿಎ ಸರ್ಕಲ್, ರಾಂಬಾಗ್ ಸರ್ಕಲ್, ಅಂಬೇಡ್ಕರ್ ಸರ್ಕಲ್ ಹಾಗೂ ರಾಜ್ಮಹಲ್ ಅರಮನೆಗಳಲ್ಲಿ ಕಾರ್ಯಕರ್ತರು ಸ್ವಾಗತ ಕೋರುವರು.
ರಾಜ್ಮಹಲ್ ಅರಮನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸಾಂಪ್ರದಾಯಿಕ ಕಲಶದೊಂದಿಗೆ ಸ್ವಾಗತ ನೀಡಲಿದೆ. ನಂತರ ರಾಜ್ಯ ಕಚೇರಿಯಲ್ಲಿ ನಿತಿನ್ ನವೀನ್ ಅವರಿಗೆ ಭವ್ಯ ಸ್ವಾಗತ ನೀಡಿ, ರಾಜ್ಯ ಪದಾಧಿಕಾರಿಗಳು ಹಾಗೂ ಕೋರ್ ಸಮಿತಿ ಸಭೆ ನಡೆಯಲಿದೆ.
ಈ ಭೇಟಿಯನ್ನು ಸಂಘಟನೆಗೆ ಹೊಸ ಚೈತನ್ಯ ತುಂಬುವ ಪ್ರಮುಖ ಕಾರ್ಯಕ್ರಮವೆಂದು ಪರಿಗಣಿಸಲಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಉತ್ಸಾಹ ಹೆಚ್ಚುವ ನಿರೀಕ್ಷೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa