ರಾಮನವಮಿ ಶುಭಾಶಯ ಕೋರಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್
ನವದೆಹಲಿ, 26 ಮಾರ್ಚ್ (ಹಿ.ಸ.): ಆ್ಯಂಕರ್:ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನ್ಮ ದಿನಾಚರಣೆಯಾದ ರಾಮ ನವಮಿ ಅಂಗವಾಗಿ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ತಮ್ಮ ಎಕ್ಸ ಸಂದೇಶದಲ್ಲಿ ಅವರು, “ತಾಳ್ಮೆ, ತ್ಯಾಗ ಮತ್ತು ನ್ಯಾಯದ ಪ್ರತೀಕವಾದ
Ramnavami


ನವದೆಹಲಿ, 26 ಮಾರ್ಚ್ (ಹಿ.ಸ.):

ಆ್ಯಂಕರ್:ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನ್ಮ ದಿನಾಚರಣೆಯಾದ ರಾಮ ನವಮಿ ಅಂಗವಾಗಿ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.

ತಮ್ಮ ಎಕ್ಸ ಸಂದೇಶದಲ್ಲಿ ಅವರು, “ತಾಳ್ಮೆ, ತ್ಯಾಗ ಮತ್ತು ನ್ಯಾಯದ ಪ್ರತೀಕವಾದ ಭಗವಾನ್ ಶ್ರೀರಾಮನ ಜೀವನವು ಮಾನವಕುಲಕ್ಕೆ ಸತ್ಯ, ಧರ್ಮ ಮತ್ತು ಅಚಲ ಮೌಲ್ಯಗಳ ಆದರ್ಶವಾಗಿದೆ. ಅವರ ಉಪದೇಶಗಳು ಸಾಮಾಜಿಕ ಸಾಮರಸ್ಯ, ಸತ್ಸಂಸ್ಕಾರ ಮತ್ತು ಸಾರ್ವಜನಿಕ ಸೇವೆಯ ಮಾರ್ಗವನ್ನು ತೋರಿಸುತ್ತವೆ” ಎಂದು ಹೇಳಿದ್ದಾರೆ.

ಭಗವಾನ್ ಶ್ರೀರಾಮನ ಕೃಪೆಯಿಂದ ಧರ್ಮವು ಅಧರ್ಮದ ಮೇಲೆ ಜಯಗಳಿಸಲಿ, ಸಮಾಜದಲ್ಲಿ ಅನೈತಿಕತೆ, ಅಹಂಕಾರ ಮತ್ತು ಅಶಾಂತಿ ನಿರ್ಮೂಲನೆಯಾಗಲಿ ಹಾಗೂ ದೇಶವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿ ಎಂಬ ಶುಭ ಹಾರೈಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande