
ಶಿವಮೊಗ್ಗ, 17 ಮಾರ್ಚ್ (ಹಿ.ಸ.):
ಆ್ಯಂಕರ್:
ಕೆಎಫ್ಡಿ (ಕ್ಯಾಸನೂರು ಅರಣ್ಯ ರೋಗ) ನಿಯಂತ್ರಣಕ್ಕೆ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಜ್ವರ ಪ್ರಕರಣಗಳಿಗೆ ತಕ್ಷಣ ಚಿಕಿತ್ಸೆ ನೀಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧಿಕಾರಿಗಳಿಗೆ ಸೂಚಿಸಿದರು.
ಕೆಎಫ್ಡಿ ನಿಯಂತ್ರಣ ಕುರಿತು ಇಂದು ನಡೆದ ಸಭೆಯಲ್ಲಿ, ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ ಭಾಗಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚಿಸಲಾಗಿದ್ದು, ತೋಟ-ಕಾಡಿಗೆ ತೆರಳುವವರು ಡೇಪಾ ಎಣ್ಣೆ ಬಳಕೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 5202 ಪರೀಕ್ಷೆಗಳಲ್ಲಿ 59 ಪಾಸಿಟಿವ್, 1 ಸಾವು ದಾಖಲಾಗಿದ್ದು, 114 ಮಂಗಗಳ ಸಾವಿನಲ್ಲಿ 31 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಹಾಟ್ಸ್ಪಾಟ್ ಪ್ರದೇಶಗಳಲ್ಲಿ ನಿಗಾ ಮತ್ತು ರಾಸಾಯನಿಕ ಸಿಂಪಡಣೆ ಕೈಗೊಳ್ಳಲಾಗಿದೆ.
ನಾಯಿ ಕಡಿತ (3906 ಪ್ರಕರಣ) ಹಾಗೂ ಹಾವು ಕಡಿತ (47 ಪ್ರಕರಣ) ಕುರಿತು ಶೀಘ್ರ ಚಿಕಿತ್ಸೆ ಪಡೆಯಲು ಸೂಚನೆ ನೀಡಲಾಗಿದ್ದು, ರೇಬಿಸ್ ಲಸಿಕೆ ಕಡ್ಡಾಯ ಎಂದು ತಿಳಿಸಿದರು.
ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸ್ವಚ್ಛತೆ, ಶುದ್ಧ ನೀರು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕೆಂದು ಸೂಚಿಸಿದರು. ಏಡ್ಸ್ ನಿಯಂತ್ರಣಕ್ಕೆ 95-95-99 ಗುರಿ ಸಾಧಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa