
ಶಿಲ್ಲಾಂಗ, 14 ಮಾರ್ಚ್ (ಹಿ.ಸ.):
ಆ್ಯಂಕರ್:
ಈಶಾನ್ಯ ಭಾರತದ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಉದ್ಘಾಟಿಸಿ ಹಾಗೂ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿಲ್ಲಾಂಗ್–ಸಿಲ್ಚಾರ್ ಕಾರಿಡಾರ್ ನಿರ್ಮಾಣಕ್ಕೂ ಅಡಿಪಾಯ ಹಾಕಲಾಯಿತು. ಈ ಯೋಜನೆ ಈಶಾನ್ಯ ಪ್ರದೇಶದ ಮೊದಲ ಪ್ರವೇಶ ನಿಯಂತ್ರಿತ ಹಸಿರು ಕ್ಷೇತ್ರದ ನಾಲ್ಕು ಪಥದ ವೇಗದ ಹೆದ್ದಾರಿ ಕಾರಿಡಾರ್ ಆಗಿರಲಿದೆ. ಸುಮಾರು ₹22,860 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ 166 ಕಿಲೋಮೀಟರ್ ಉದ್ದದ ಈ ಕಾರಿಡಾರ್, ಮೇಘಾಲಯ ಮತ್ತು ಅಸ್ಸಾಂ ರಾಜ್ಯಗಳ ನಡುವಿನ ಸಂಪರ್ಕವನ್ನು ಬಲಪಡಿಸುವುದರ ಜೊತೆಗೆ ಗುವಾಹಟಿ ಹಾಗೂ ಸಿಲ್ಚಾರ್ ನಡುವಿನ ಪ್ರಯಾಣ ಸಮಯವನ್ನು ಈಗಿನ 8.5 ಗಂಟೆಯಿಂದ ಸುಮಾರು 5 ಗಂಟೆಗಳವರೆಗೆ ಕಡಿಮೆ ಮಾಡಲಿದೆ.
ಇದಲ್ಲದೆ, ರಾಷ್ಟ್ರೀಯ ಹೆದ್ದಾರಿ 306 ಮೇಲಿನ ಸಿಲ್ಚಾರ್ ಎಲಿವೇಟೆಡ್ ಕಾರಿಡಾರ್ (ಹಂತ–1) ಯೋಜನೆಗೂ ಶಂಕುಸ್ಥಾಪನೆ ನೆರವೇರಿಸಲಾಯಿತು.
ಇದೇ ವೇಳೆ ಕರೀಂಗಂಜ್ ಜಿಲ್ಲೆ ಪಥರ್ಕಂಡಿಯಲ್ಲಿ ಹೊಸ ಕೃಷಿ ಕಾಲೇಜು ನಿರ್ಮಾಣಕ್ಕೂ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದರು.
ಈ ಯೋಜನೆಗಳ ಮೂಲಕ ಈಶಾನ್ಯ ಭಾರತದಲ್ಲಿ ಸಂಪರ್ಕ ವ್ಯವಸ್ಥೆ, ಶಿಕ್ಷಣ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa