ಗೋಪಾಲ ಕೃಷ್ಣ ಗೋಖಲೆ ಪುಣ್ಯತಿಥಿ ; ಡಿ.ಕೆ. ಶಿವಕುಮಾರ್ ಸ್ಮರಣೆ
ನವದೆಹಲಿ, 19 ಫೆಬ್ರವರಿ (ಹಿ.ಸ.) : ಆ್ಯಂಕರ್ : ದೇಶಭಕ್ತ ಹಾಗೂ ಸಾಮಾಜಿಕ ಸುಧಾರಕ ಗೋಪಾಲ ಕೃಷ್ಣ ಗೋಖಲೆ ಅವರ ಪುಣ್ಯತಿಥಿಯಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೌರವ ಸಲ್ಲಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅವರು,, ಗೋಖಲೆ ಅವರು ದೇಶದ ರಾಜಕೀಯ ಜಾಗೃತಿಗೆ ಮಹತ್ತರ ಕೊಡು
Gokale


ನವದೆಹಲಿ, 19 ಫೆಬ್ರವರಿ (ಹಿ.ಸ.) :

ಆ್ಯಂಕರ್ : ದೇಶಭಕ್ತ ಹಾಗೂ ಸಾಮಾಜಿಕ ಸುಧಾರಕ ಗೋಪಾಲ ಕೃಷ್ಣ ಗೋಖಲೆ ಅವರ ಪುಣ್ಯತಿಥಿಯಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೌರವ ಸಲ್ಲಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅವರು,, ಗೋಖಲೆ ಅವರು ದೇಶದ ರಾಜಕೀಯ ಜಾಗೃತಿಗೆ ಮಹತ್ತರ ಕೊಡುಗೆ ನೀಡಿದ ದೂರದರ್ಶಿ ನಾಯಕರು ಎಂದು ಹೇಳಿದ್ದಾರೆ.

ಆಡಳಿತದಲ್ಲಿ ಭಾರತೀಯರ ಹೆಚ್ಚಿನ ಭಾಗವಹಿಸುವಿಕೆ, ಶಿಕ್ಷಣದ ವಿಸ್ತರಣೆ ಹಾಗೂ ಸಾಮಾಜಿಕ ಸುಧಾರಣೆಗಾಗಿ ಅವರು ಅವಿರತವಾಗಿ ಶ್ರಮಿಸಿದ ವಿಚಾರವನ್ನು ಅವರು ಸ್ಮರಿಸಿದ್ದಾರೆ.

ಗೋಖಲೆ ಅವರ ಸೇವಾ ಮನೋಭಾವ, ನೈತಿಕತೆ ಮತ್ತು ಪ್ರಜಾಪ್ರಭುತ್ವ ಜವಾಬ್ದಾರಿತನದ ಮೌಲ್ಯಗಳು ಇಂದಿಗೂ ಸಾರ್ವಜನಿಕ ಜೀವನಕ್ಕೆ ಮಾರ್ಗದರ್ಶಕವಾಗಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಅವರ ಆದರ್ಶಗಳನ್ನು ಅನುಸರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande